ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶ್ರಮದಾನ

0

 

ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸೆಪ್ಟೆಂಬರ್ ೨೫ ರಿಂದ ಅಕ್ಟೋಬರ್ ೫ ತನಕ ನವರಾತ್ರಿ ಉತ್ಸವ ನಡೆಯಲಿರುವುದರಿಂದ ಸೆಪ್ಟೆಂಬರ್ ೧೮ ರಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲುರವರ ಮಾರ್ಗದರ್ಶನದಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಮುರುಳ್ಯ ಒಡಿಯೂರು ಸಂಘಗಳು, ಎಣ್ಮೂರು ಧರ್ಮಸ್ಥಳ ಸಂಘಗಳು, ಕೇರ್ಪಡ ಕಲಾಸಂಘ, ಕೇರ್ಪಡ ಕೂಡುಕಟ್ಟಿನ ಸದಸ್ಯರು, ಸ್ಥಳೀಯ ಭಕ್ತಾದಿಗಳು ಸೇರಿ ಮುಳ್ಳುಗಂಟಿಗಳನ್ನು ಕಡಿದು, ಹೊರಾಂಗಣ ಸ್ವಚ್ಚತೆ, ತೀರ್ಥಬಾವಿ ಸ್ವಚ್ಚತೆ, ಕಟ್ಟಿಗೆ ತಯಾರಿ, ಮಳೆ ನೀರು ನಿಲ್ಲದಂತೆ ಚರಂಡಿ, ಸಗಣಿ ಸಾರಿಸುವುದು ಮೊದಲಾದ ಕೆಲಸಗಳನ್ನು ಮಾಡಲಾಯಿತು.

 

LEAVE A REPLY

Please enter your comment!
Please enter your name here