ಅಡ್ಕಾರು: ಶ್ರೀ ಕಾರ್ತಿಕೇಯ ಯುವ ಸೇವಾ ಸಂಘದ ಮಹಾಸಭೆ

0

 

ನೂತನ ಪದಾಧಿಕಾರಿಗಳ ಆಯ್ಕೆ

ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಕಾರ್ತಿಕೇಯ ಯುವ ಸೇವಾ ಸಂಘದ ಮಹಾಸಭೆಯು ಸಂಘದ ಅಧ್ಯಕ್ಷ ರವಿನ್ ರಾಜ್ ಅವರ ಅಧ್ಯಕ್ಷತೆಯಲ್ಲಿ ಆ.30ರಂದು ಶ್ರೀ ಕಾರ್ತಿಕೇಯ ಸಭಾಭವನದಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ರವಿನ್ ರಾಜ್ ಅಡ್ಕಾರುಪದವು, ನೂತನ ಅಧ್ಯಕ್ಷರಾಗಿ ಯತೀಂದ್ರ ಅಡ್ಕಾರುಬೈಲು, ಪ್ರಧಾನ ಕಾರ್ಯದರ್ಶಿಯಾಗಿ ಸುಬ್ರಮಣ್ಯ ಪ್ರಸಾದ್ ಅಡ್ಕಾರು,
ಖಜಾಂಜಿಯಾಗಿ ದಾಮೋದರ ಎ. ಎಸ್. ಅಡ್ಕಾರುಪದವು,
ಜೊತೆ ಕಾರ್ಯದರ್ಶಿಯಾಗಿ ಸುಮಂತ್ ಅಡ್ಕಾರುಪದವು ಆಯ್ಕೆಯಾದರು.


ಸದಸ್ಯರುಗಳಾಗಿ
ಬಾಲಕೃಷ್ಣ ಅಡ್ಕಾರುಬೈಲು, ರಾಜೇಶ್ ಅಡ್ಕಾರುಬೈಲು,
ಶಶಿಧರ ಪದವು, ಮಿಥುನ್ ಪದವು
ಭವಿಶ್ ಪದವು, ವಿನಾಯಕ್ ಪದವು ,ಪ್ರಸನ್ನ ಪದವು. ಶ್ರೀಕಾಂತ್ ಅಡ್ಕಾರುಬೈಲು, ವಿಜಯ ಅಡ್ಕಾರು ಸೇರಿದಂತೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here