ಕೊಯ್ಯೂರು :ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ನವೀನ್ ಕುಮಾರ್ ಮತ್ತು ಉಪಾಧ್ಯಕ್ಷರಾಗಿ ಸಂಜೀವ ಮಲೆಕುಡಿಯ ಅವಿರೋಧವಾಗಿ ಆಯ್ಕೆಯಾದರು.
ನ.10 ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಇವರನ್ನು ಆಯ್ಕೆ ಮಾಡಲಾಯಿತು.ನಿಕಟಪೂರ್ವ ಅಧ್ಯಕ್ಷ ಉಜ್ವಲ್ ಕುಮಾರ್, ನಿಕಟ ಪೂರ್ವ ಉಪಾಧ್ಯಕ್ಷ ಡೀಕಯ್ಯ ಪೂಜಾರಿ , ನಿರ್ದೇಶಕರುಗಳಾದ ಅಶೋಕ್ ಕುಮಾರ್ ಎ., ಯತೀಶ್ ಪಿ., ಪುರುಷೋತ್ತಮ, ಹೊನ್ನಪ್ಪ ಪೂಜಾರಿ, ರವೀಂದ್ರನಾಥ್ ಪಿ., ಪರಮೇಶ್ವರ ಗೌಡ,ಗುಲಾಬಿ, ರೇವತಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನಂತಕೃಷ್ಣ ಭಟ್, ಉಪಸ್ಥಿತರಿದ್ದರು ಸಿಬ್ಬಂದಿಗಳು ಸಹಕರಿಸಿದರು. ದ. ಕ. ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಅಧಿಕ್ಷರು ಗೋಪಾಲ ಎನ್. ಜಿ.
ಚುನಾವಣಾ ಅಧಿಕಾರಿಗಳಾಗಿದ್ದರು.