ಕೊಯ್ಯೂರಿನಲ್ಲಿ ಗೃಹಪ್ರವೇಶ ಕಾರ್ಯಕ್ರಮದ ಪ್ರಯುಕ್ತ ಭಜನಾ ಕಮ್ಮಟೋತ್ಸವ

0

ಕೊಯ್ಯೂರು: ಕೊಯ್ಯೂರು ಗ್ರಾಮದ ಬೆರ್ಕೆ ದಾಮೋದರ ಗೌಡ ಹಾಗೂ ಮನೆಯವರ ನೂತನ ಮನೆಯಲ್ಲಿ ಭಜಕರನ್ನು ಸೇರಿಸಿ ಭಜನಾ ಕಾರ್ಯಕ್ರಮವನ್ನು ಶ್ರೀರಾಮ ನಿಲಯ ಗೃಹಪ್ರವೇಶದ ಹಿಂದಿನ ರಾತ್ರಿ ಭಜನಾ ಕಮ್ಮಟೋತ್ಸವವನ್ನು ಆಯೋಜಿಸಿದರು.

ತಾಲೂಕಿನಲ್ಲಿ ಪ್ರಥಮ ಬಾರಿಗೆ ಮನೆಯ ಖಾಸಗಿ ಕಾರ್ಯಕ್ರಮ ಒಂದರಲ್ಲಿ 150ಕ್ಕೂ ಮಿಕ್ಕಿ ಭಜಕರು ಸೇರಿ ಭಜನಾ ಕಮ್ಮಟೋತ್ಸವೂ ನಡೆದು ಕಾರ್ಯಕ್ರಮದಲ್ಲಿ ಸೇರಿದ್ದ ಅತಿಥಿಗಳನ್ನು ಹಾಗೂ ಬಂಧುಗಳನ್ನು ಭಕ್ತಿಯ ಸಾಗರಕ್ಕೆ ಕೊಂಡೊಯ್ಯುವಂತೆ ಮಾಡಿತು.

ಈ ಕಾರ್ಯಕ್ರಮವು ಹರೀಶ್ ವಿ. ನೆರಿಯ ಇವರ ಸಹಕಾರದೊಂದಿಗೆ ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿ ಪಿ.ಚಂದ್ರಶೇಖರ ಸಾಲಿಯನ್ ಇವರ ಸಂಯೋಜನೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here