ಓಡಿಲ್ನಾಳ : ಇಲ್ಲಿಯ ಸಂಬೋಳ್ಯ ಮನೆ ನಿವಾಸಿ ಶೇಖರ ಶೆಟ್ಟಿಗಾರ (53ವ) ಅವರು ಸೆ.21 ರಂದು ಬೆಳ್ತಂಗಡಿಗೆ ಹೋಗುವುದಾಗಿ ಹೇಳಿ ಹೋದವರು ನಾಪತ್ತೆಯಾಗಿರುವುದಾಗಿ ಅವರ ಪುತ್ರ ಮೋಹನ ಶೆಟ್ಟಿಗಾರ ಸೆ.28ರಂದು ತಡವಾಗಿ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.
ಬೆಳಿಗ್ಗೆ 9 ಗಂಟೆಗೆ ಮನೆಯಲ್ಲಿ ಅಮ್ಮನ ಬಳಿ ಬೆಳ್ತಂಗಡಿಗೆ ಹೋಗುವುದಾಗಿ ಹೇಳಿ ಹೋದವರು ಸಂಜೆ ತನಕ ಬರಲಿಲ್ಲ. ಈ ಮೊದಲು ಸಹ ಹೊರಗೆ ಹೋದವರು ಒಂದೆರಡು ದಿನಗಳ ಬಳಿಕ ಮನೆಗೆ ಬರುತ್ತಿದ್ದರು. ಈ ಬಾರಿಯೂ ಬರಬಹುದೆಂದು ಭಾವಿಸಿದ್ದೇವು. ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಅವರು ಪತ್ತೆಯಾಗದಿರುವುದರಿಂದ ತಡವಾಗಿ ದೂರು ನೀಡುತ್ತಿದ್ದೇವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಖಾವಿ ಬಣ್ಣದ ಲುಂಗಿ, ನೀಲಿ ಬಣ್ಣದ ಅರ್ಧ ತೋಳಿನ ಅಂಗಿ ಧರಿಸಿದ್ದು, ಕಂಡು ಬಂದಲ್ಲಿ ಬೆಳ್ತಂಗಡಿ ಠಾಣೆಗೆ ಮಾಹಿತಿ ನೀಡುವಂತೆ ವಿನಂತಿಸಲಾಗಿದೆ.