ಬೆಳ್ತಂಗಡಿಗೆ ಹೋಗಿ ಬರುವುದಾಗಿ ಹೋಗಿದ್ದ ಸಂಬೋಳ್ಯ ಶೇಖರ ಶೆಟ್ಟಿಗಾರ ನಾಪತ್ತೆ

0

ಓಡಿಲ್ನಾಳ : ಇಲ್ಲಿಯ ಸಂಬೋಳ್ಯ ಮನೆ ನಿವಾಸಿ ಶೇಖರ ಶೆಟ್ಟಿಗಾರ (53ವ) ಅವರು ಸೆ.21 ರಂದು ಬೆಳ್ತಂಗಡಿಗೆ ಹೋಗುವುದಾಗಿ ಹೇಳಿ ಹೋದವರು ನಾಪತ್ತೆಯಾಗಿರುವುದಾಗಿ ಅವರ ಪುತ್ರ ಮೋಹನ ಶೆಟ್ಟಿಗಾರ ಸೆ.28ರಂದು ತಡವಾಗಿ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.
ಬೆಳಿಗ್ಗೆ 9 ಗಂಟೆಗೆ ಮನೆಯಲ್ಲಿ ಅಮ್ಮನ ಬಳಿ ಬೆಳ್ತಂಗಡಿಗೆ ಹೋಗುವುದಾಗಿ ಹೇಳಿ ಹೋದವರು ಸಂಜೆ ತನಕ ಬರಲಿಲ್ಲ. ಈ ಮೊದಲು ಸಹ ಹೊರಗೆ ಹೋದವರು ಒಂದೆರಡು ದಿನಗಳ ಬಳಿಕ ಮನೆಗೆ ಬರುತ್ತಿದ್ದರು. ಈ ಬಾರಿಯೂ ಬರಬಹುದೆಂದು ಭಾವಿಸಿದ್ದೇವು. ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಅವರು ಪತ್ತೆಯಾಗದಿರುವುದರಿಂದ ತಡವಾಗಿ ದೂರು ನೀಡುತ್ತಿದ್ದೇವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಖಾವಿ ಬಣ್ಣದ ಲುಂಗಿ, ನೀಲಿ ಬಣ್ಣದ ಅರ್ಧ ತೋಳಿನ ಅಂಗಿ ಧರಿಸಿದ್ದು, ಕಂಡು ಬಂದಲ್ಲಿ ಬೆಳ್ತಂಗಡಿ ಠಾಣೆಗೆ ಮಾಹಿತಿ ನೀಡುವಂತೆ ವಿನಂತಿಸಲಾಗಿದೆ.

LEAVE A REPLY

Please enter your comment!
Please enter your name here