ಧರ್ಮಸ್ಥಳ : ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢ ಶಾಲಾ ವಿದ್ಯಾರ್ಥಿನಿಯರಾದ ಕುಮಾರಿ ಪ್ರಜ್ಞಾ 9ನೇ ತರಗತಿ, ಕುಮಾರಿ ಪ್ರತೀಕ್ಷಾ 9ನೇ ತರಗತಿ, ಕುಮಾರಿ ರಚನಾ 10ನೇ ತರಗತಿ ಇವರು ಅನುಕ್ರಮವಾಗಿ ಕನ್ನಡ ವಿಶೇಷ ಭಾಷಣ ಸ್ಪರ್ಧೆ, ಛದ್ಮವೇಷ ಸ್ಪರ್ಧೆ ಹಾಗೂ ತುಳು ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮುಖ್ಯೋಪಾಧ್ಯಾಯ ಧನ್ಯ ಕುಮಾರ್ ರವರ ಮಾರ್ಗದರ್ಶನದಲ್ಲಿ ಕನ್ನಡ ಶಿಕ್ಷಕ ಯುವರಾಜ್, ತುಳು ಭಾಷಾ ಶಿಕ್ಷಕ ಶಶಿಧರ್, ಗಣಿತ ಶಿಕ್ಷಕ ರಂಜಿತ್ ಹಾಗೂ ಚಿತ್ರಕಲಾ ಶಿಕ್ಷಕ ರೂಪೇಶ್ ರವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುತ್ತಾರೆ.