ಮುಂಡಾಜೆ: ಶ್ರೀ ಪರಶುರಾಮ ದೇವಸ್ಥಾನದ ವಠಾರದಲ್ಲಿ 46ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಆ.30ರಂದು ಮಹಾಗಣಪತಿ ಪ್ರತಿಷ್ಠಾಪಿಸಿ ಆಚರಿಸಲಾಯಿತು.
ಆ.31ರಂದು ಸಾಂಸ್ಕೃತಿಕ ಕಾರ್ಯಕ್ರಮ, ಮಧ್ಯಾಹ್ನ ಅನ್ನಸಂತರ್ಪಣೆ ಸಂಜೆ ಶೋಭಾಯಾತ್ರೆಯಲ್ಲಿ ವಿವಿಧ ಗೊಂಬೆ ಕುಣಿತ, ಕೀಲುಕುದುರೆಗಳು ಶೋಭೆಯನ್ನು ನೀಡಿತು.
ನಂತರ ಶೋಭಾಯಾತ್ರೆಯ ಮೂಲಕ ಮೃತ್ಯುಂಜಯ ನದಿಯಲ್ಲಿ ವಿಸರ್ಜಿಸಲಾಯಿತು.