ಗೇರುಕಟ್ಟೆ: ಸಹಕಾರಿ ಸಭಾಭವನದಲ್ಲಿ ಆ. 31 ರಂದು ಸುವರ್ಣ ಮಹೋತ್ಸವ ಸಾರ್ವಜನಿಕ ಗಣೇಶೋತ್ಸವದ ಶುಭ ಸಂದರ್ಭದಲ್ಲಿ ಚೈತನ್ಯ ಹಾಗೂ ಚಿರಂಜೀವಿ ಶೆಟ್ಟಿ ರಚಿಸಿದ ಕುರುಡು ಸಮಾಜ ಎಂಬ ಕಿರು ಚಲನಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗಣೇಶೋತ್ಸವದ ಅಧ್ಯಕ್ಷರಾದ ಪುರುಷೋತ್ತಮ ಜಿ , ಸುವರ್ಣ ಮಹೋತ್ಸವದ ಅಧ್ಯಕ್ಷರಾದ ಸುರೇಶ್ ಕುಮಾರ್. ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್ ವೇಣೂರು. ಸ್ಮಿತೇಶ್ .ಮತ್ತು ತಂಡದ ಎಲ್ಲಾ ಸದಸ್ಯರು ಉಪಸ್ತಿತರಿದ್ದರು. ಸಚಿನ್ ಗೇರುಕಟ್ಟೆ ಸ್ವಾಗತಿಸಿ ಧನ್ಯವಾದ ಸಲ್ಲಿಸಿದರು.