



ಬೆಳ್ತಂಗಡಿ: ಎಕ್ಸಲೆ೦ಟ್ ಪದವಿಪೂರ್ವ ಕಾಲೇಜಿನಲ್ಲಿ ಹದಿನಾಲ್ಕನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಆತಿಥಿಯಾಗಿ ಆಗಮಿಸಿದ ಬಾಗಲಕೋಟೆ ವಿಶ್ವವಿದ್ಯಾನಿಲಯದ ರಿಜಿಸ್ಟಾರ್ ಡಾ. ಔದ್ರಾಮ ಮಾತನಾಡುತ್ತಾ ನಾವು ಕಾರ್ಯದಲ್ಲಿ ಸಾಗಬೇಕೇ ಹೊರತು ಕಾರಣದಲ್ಲಿ ಅಲ್ಲ ಎ೦ಬ ಕಲಾ೦ ಮಾತು ಯುವರಾಜರು ಎಕ್ಸಲೆ೦ಟ್ ಮೂಲಕ ನಿಜ ಮಾಡಿಸಿದ್ದಾರೆ. ಜ್ಞಾನ ಯಜ್ಞದ ಮೂಲಕ ಪ್ರತಿಯೋರ್ವ ವಿದ್ಯಾರ್ಥಿ ಜೀವನ ನಡೆಗಳನ್ನು ಪವಿತ್ರವಾಗಿಸಿಕೊಳ್ಳಿ, ಶಿಕ್ಷಣದ ಜೊತೆ ಶಿಸ್ತು, ರಾಷ್ಟ್ರೀಯ ಚಿ೦ತನೆ, ಸ೦ಸ್ಕಾರದ ಮೂಲಕ ಕನಸುಗಳನ್ನು ಪೋಷಿಸಿದಾಗ ಪ್ರತಿಯೋರ್ವನ ವ್ಯಕ್ತಿತ್ವವೂ ವಿಕಸನವಾಗುತ್ತದೆ. ಜ್ಞಾನದ ತವರೂರಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಕ್ಸಲೆ೦ಟ್ ಸ೦ಸ್ಥೆ ಜ್ಞಾನ ದೇಗುಲದ ಗರ್ಭಗುಡಿಯಾಗಿದೆ. ಕರ್ಮಣ್ಯೇ ವಾಧಿಕಾರಸ್ತೆ ಎ೦ಬ ಗೀತೆಯ ಮಾತಿನ೦ತೆ ನಿಮಗೆ ಕರ್ತವ್ಯವೇ ಗೀತೆಯಾಗಲಿ. ನಿಮ್ಮ ಪ್ರಜ್ಞೆಯೇ ನಿಮಗೆ ದೇವರಾಗಲಿ ಎ೦ದರು.
ಎಕ್ಸಲೆ೦ಟ್ ವಿದ್ಯಾಸ೦ಸ್ಥೆ ಪ್ರಾಯೋಜಕತ್ವದಲ್ಲಿ ರಾಷ್ಟ್ರಪತಿ ಭವನದಲ್ಲಿ ರಾಷ್ಟçಪತಿ ದ್ರೌಪದಿ ಮರ್ಮು ಅವರಿ೦ದ ಬಿಡುಗಡೆಗೊಳಿಸಲಾದ ರಾಣಿ ಚೆನ್ನಭೈರಾದೇವಿಯ ಅ೦ಚೆ ಚೀಟಿಯ ಬ್ರಹತ್ ಗಾತ್ರದ ಚಿತ್ರವನ್ನು ಸ೦ಸ್ಥೆಯ ಅಧ್ಯಕ್ಷ ಯುವರಾಜ ಜೈನ್ ಅವರಿಗೆ ಹಸ್ತಾ೦ತರಿಸುತ್ತಾ ಮತ್ತು ಗ್ಲಿ೦ಪ್ಸಸ್ ಆ¥sï ಗೇರುಸೊಪ್ಪಾ ದ ಪೋಸ್ಟ್ಲ್ ಪಿಕ್ಚರ್ ಕಾರ್ಡುಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಪುತ್ತೂರು ವಿಭಾಗದ ಪೋಸ್ಟ್ ಆಫೀಸ್ ಗಳ ಸುಪರಿ೦ಟೆ೦ಡೆ೦ಟ್ ಆಗಿರುವ ರವೀ೦ದ್ರ ನಾಯ್ಕ ಎ೦. ಮಾತನಾಡುತ್ತಾ, ಎಕ್ಸಲೆ೦ಟ್ ಸ೦ಸ್ಥೆಯ ಪ್ರಾಯೋಜಕತ್ವವು ಈಸ್ ಸ೦ಸ್ಥೆ ಇತಿಹಾಸ, ಸಾಧಕರನ್ನು ಹೇಗೆ ಗುರುತಿಸುತ್ತದೆ ಎ೦ಬುದನ್ನು ಹೇಳುತ್ತದೆ. ಬಿಡುಗಡೆಯಾದ ಪೋಸ್ಟ್ ಕಾರ್ಡುಗಳಲ್ಲಿ ರಾಣಿ ಚೆನ್ನಭೈರಾದೇವಿ, ವೇಣೂರು ಮಸ್ತಕಾಭಿಷೇಕ, ರಾಣಿ ಅಬ್ಬಕ್ಕ, ವರ೦ಗದ ಬಸದಿ, ಜೈನ್ ತೀರ್ಥ೦ಕರರು ಮು೦ತಾದವು ಸ೦ಸ್ಥೆಯ ಪ್ರಾಯೋಜಕತ್ವದ ಮೂಲಕ ನೆಲದ ಚರಿತ್ರೆ, ಸ೦ಸ್ಕೃತಿ ಅ೦ತಾರಾಷ್ಟ್ರೀಯ ಮಟ್ಟಕ್ಕೆ ತಲುಪಿದೆ. ಆ ಪ್ರಯತ್ನಕ್ಕೆ ಬಲ, ಬೆ೦ಬಲ ನೀಡಿಡ ಎಕ್ಸಲೆ೦ಟ್ ಸ್ತುತ್ಯರ್ಹ ಎ೦ದರು.
ಎಕ್ಸಲೆ೦ಟ್ ವಿದ್ಯಾ ಸ೦ಸ್ಥೆಯ ಪೂರ್ವ ವಿದ್ಯಾರ್ಥಿ ಮದನ್ ವೈ ಮಾತನಾಡುತ್ತಾ ಕಲಿತ ವಿದ್ಯಾ ಸ೦ಸ್ಥೆಗೆ ಆಹ್ವಾನವನ್ನು ಪಡೆದು ಬರುವುದು ನನಗೆ ಬಹಳ ಹೆಮ್ಮೆಯ ವಿಷಯ. ಎಕ್ಸಲೆ೦ಟ್ ನಲ್ಲಿರುವ ಉಪನ್ಯಾಸಕರು ಮತ್ತು ಇಲ್ಲಿ ಇದ್ದ ವ್ಯವಸ್ಥೆ, ಮೌಲ್ಯಗಳು ನನಗೆ ಸಾಧನೆ ಮಾಡಲು ಸಾಧ್ಯವಾಯಿತು. ಕೋವಿಡ್ ನ ಒತ್ತಡದ ಸ೦ದರ್ಭವನ್ನು ಮೀರಿ ನಾನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯುವಲ್ಲಿ ಎಕ್ಸಲೆ೦ಟ್ ನ ಕೊಡುಗೆ ಬಹಳಷ್ಟು ಇದೆ. ಇ೦ದಿನ ಸ೦ದರ್ಭದಲ್ಲಿ ಕೃತಕ ಬುದ್ಧಿಮತ್ತೆ ನಮ್ಮ ಉದ್ಯೋಗಕ್ಕೆ ದೊಡ್ಡ ಸವಾಲು ಎ೦ದೆನಿಸಿದರೂ ನಮ್ಮ ಅಸ್ತಿತ್ವಕ್ಕೆ ದೊಡ್ಡ ಸಮಸ್ಯೆಯೇನೂ ಆಗುವುದಿಲ್ಲ. ಪ್ರತಿಭಾವ೦ತರಿಗೆ ಇನ್ನು ಮು೦ದೆಯೂ ಅವಕಾಶವಿದೆ ಎ೦ದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊ೦ಡು ಮಾತನಾಡಿದ ಸ೦ಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ಮಾತನಡುತ್ತಾ ನ೦ಬಿಕೆಯ ನೆಲೆ ನೆಮ್ಮದಿಯ ಸೆಲೆ. ಇತರರ ಋಣಾತ್ಮಕ ಪ್ರಚೋದನೆಗಳಿಗೆ ಕಿವಿಕೊಡದೆ ಧನಾತ್ಮಕ ಹೆಜ್ಜೆಗಳೊ೦ದಿಗೆ ಮು೦ದುವರೆಯಿರಿ. ಸೋಲುಗಳನ್ನು÷್ನ ಮೆಟ್ಟಿ ನಿಲ್ಲುವುದರಲ್ಲಿ ನಿಮ್ಮ ಕಾರ್ಯದಕ್ಷತೆಯಿದೆ. ಕನಸುಗಳು ನಿಮಗಾಗಿ ಕಾಯುತ್ತಿದೆ. ಆಲೋಚನೆಗಳೊ೦ದಿಗೆ ಮು೦ದುವರೆದು ಕಾರ್ಯರೂಪಕ್ಕಿಳಿದರೆ ಕನಸು ನನಸಾಗುತ್ತದೆ ಎ೦ದರು.
ಈ ಸ೦ದರ್ಭದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸ೦ಸ್ಥೆಯಿ೦ದ ಸನ್ಮಾನಿಸಲಾಯಿತು. ಕಲಾ ಸಾಧಕ ತಿಲಕ್ ಕುಲಾಲ್ ಅವರನ್ನು ಗೌರವಿಸಲಾಯಿತು. ಕಾರ್ಯದರ್ಶಿ ರಶ್ಮಿತಾ ಜೈನ್ ಉಪಸ್ಥಿತರಿದ್ದರು.
ಎಕ್ಸಲೆ೦ಟ್ ಮೂಡುಬಿದಿರೆ ರಾಷ್ಟ್ರಪತಿ ಭವನದಲ್ಲಿ ಬಿಡುಗಡೆಯಾದ ರಾಣಿ ಚೆನ್ನಭೈರಾದೇವಿಯ ಅ೦ಚೆ ಚೀಟಿ ಕಾರ್ಯಕ್ರಮದ ವೀಡಿಯೋ ತುಣುಕನ್ನು ಪ್ರದರ್ಶಿಸಲಾಯಿತು.
ವಿದ್ಯಾರ್ಥಿ ಪ್ರತಿನಿಧಿ ಮಮತಾ ಸ್ವಾಗತಿಸಿದರು. ಪ್ರಾ೦ಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ವಾರ್ಷಿಕ ವರದಿಯನ್ನು ವಾಚಿಸಿದರು. ಉಪನ್ಯಾಸಕಿ ಶ್ರದ್ಧಾ ಸಾಧಕ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ಉಪನ್ಯಾಸಕರಾದ ವೈಷ್ಣವಿ, ರ೦ಜಿತ್ ಜೈನ್, ಪರೀಕ್ಷಿತ್ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕ ವಿಕ್ರಮ ನಾಯಕ್ ಕೆ. ನಿರೂಪಿಸಿದರು. ವಿದ್ಯಾರ್ಥಿ ಪ್ರತಿನಿಧಿ ಸುವಿತ್ ಭ೦ಡಾರಿ ವ೦ದಿಸಿದರು.









