
ಬೆಳ್ತಂಗಡಿ: ಯೂ ಟ್ಯೂಬರ್ ಸಮೀರ್ ಎಂ.ಡಿ. ಎಂಬಾತನ ಬನ್ನೇರುಘಟ್ಟದಲ್ಲಿರುವ ಮನೆಯನ್ನು ಸುತ್ತುವರಿದಿರುವ ಧರ್ಮಸ್ಥಳ ಪೊಲೀಸರು, ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಎಸ್ ಐ ಟಿ ತನಿಖೆ ನಡೆಸುತ್ತಿರುವ ಪ್ರಕರಣದ ಬಗ್ಗೆ ಸಮೀರ್ ಎಂ.ಡಿ. ತನ್ನ ಧೂತ ಯೂ ಟ್ಯೂಬ್ ಚಾನೆಲ್ ನಲ್ಲಿ ಎಐ ಆಧಾರಿತ 23ನಿಮಿಷದ ವೀಡಿಯೋ ಹರಿಬಿಟ್ಟಿದ್ದ, ಇದರಲ್ಲಿ ಪ್ರಚೋದನಕಾರಿ ಹೇಳಿಕೆ, ಕಪೋಲಕಲ್ಪಿತ ಎಐ ವೀಡಿಯೋ ಬಳಕೆ, ಪ್ರಕರಣದ ತನಿಖೆಗೂ ತೊಂದರೆಯನ್ನುಂಟು ಮಾಡುವ ಹಿನ್ನಲೆಯಲ್ಲಿ ಧರ್ಮಸ್ಥಳದ ಪೊಲೀಸ್ ಉಪನಿರೀಕ್ಷಕ ಸಮರ್ಥ್ ಆರ್ ಗಾಣಿಗೇರ್ 12-7-2025ರಂದು ದೂರು ದಾಖಲಿಸಿಕೊಂಡಿದ್ದರು. ಈ ಬಗ್ಗೆ ಹೇಳಿಕೆ ನೀಡಲು ನಿಗದಿತ ಸಮಯದೊಳಗೆ ಠಾಣೆಗೆ ಹಾಜರಾಗುವಂತೆ ನೀಡಲಾದ ನೊಟೀಸ್ ಗೆ ಸ್ಪಂದಿಸದ ಸಮೀರ್ ನನ್ನು ಬಂಧಿಸಲು ಬಲೆ ಬೀಸಿದ್ದಾರೆ. ಬನ್ನೆರುಘಟ್ಟದ ಸಮೀಪ ಇರುವ ಸಮೀರ್ ಎಂ ಡಿ ಯ ಮನೆಗೆ ಧರ್ಮಸ್ಥಳ ಪೊಲೀಸರು ತಲುಪಿದ್ದರೂ ಆತ ಅಲ್ಲಿ ಇಲ್ಲದೆ ಪರಾರಿ ಆಗಿದ್ದಾನೆ ಎನ್ನಲಾಗಿದೆ.