
ಬೆಳ್ತಂಗಡಿ: ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಷನ್ ಬೆಳ್ತಂಗಡಿ ಕ್ಷೇತ್ರ ಸಮಿತಿ ಮಹಾಸಭೆ ಮತ್ತು ಆಟಿಡೊಂಜಿ ದಿನ, ಆಟೋಟ ಸ್ಪರ್ಧೆಗಳು ಮತ್ತು ಆಟಿಯ ತಿಂಡಿ ತಿನಿಸುಗಳ ಸವಿ ಭೋಜನ ಕಾರ್ಯಕ್ರಮ ಆ.5 ರಂದು ಸಂತೆಕಟ್ಟೆ ಪಿನಾಕಿ ಸಭಾಭವನ ಮುಂಭಾಗದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಷನ್ ಬೆಳ್ತಂಗಡಿ ಕ್ಷೇತ್ರ ಸಮಿತಿ ಅಧ್ಯಕ್ಷೆ ವೇದಾವತಿ ಜನಾರ್ಧನ್ ವಹಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಎಕ್ಸೆಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿ ಟೈಲರ್ಸ್ ಸಂಘ ತಾಲೂಕಿನಲ್ಲಿ ಪ್ರತಿಷ್ಠಿತ ಸಂಘವಾಗಿದೆ. ನಿಮ್ಮ ಸಂಘದ ಬಗ್ಗೆ ನನಗೆ ಅಭಿಮಾನವಿದೆ. ಕಾಯಕವೇ ಕೈಲಾಸ ಎಂಬಂತೆ ನಾವು ಯಾವುದೇ ಕೆಲಸ ಮಾಡುವುದಿದ್ದರು ಶ್ರದ್ದೆಯಿಂದ ಮಾಡಬೇಕು. ನಾವು ಮಾಡುವ ಕೆಲಸದಲ್ಲಿ ನಂ.1 ಆಗಿರಬೇಕು, ನನ್ನನ್ನು ಗುರುತಿಸಿ ಗೌರವಿಸಿದಕ್ಕೆ ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎ. ಪ್ರಜ್ವಲ್ ಕುಮಾರ್, – ರಾಜ್ಯಸಮಿತಿ ಉಪಾಧ್ಯಕ್ಷ ರೊ। ಸುರೇಶ್ ಸಾಲ್ಯಾನ್, ಜಿಲ್ಲಾ ಮಾಜಿ ಅಧ್ಯಕ್ಷ ಜಯಂತ್ ಉರ್ಲಾಂಡಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ನಾಗೇಶ್ ಕುಮಾರ್, ಕ್ಷೇತ್ರ ಕೋಶಾಧಿಕಾರಿ ರವೀಂದ್ರ ಗೇರುಕಟ್ಟೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜೆಇಇ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 1542ನೇ ರ್ಯಾಂಕ್ ಪಡೆದ ಅಚಿಂತ್ಯಾ ದಾಸ್ ಮತ್ತು ಎಸ್.ಎಸ್.ಎಲ್.ಸಿ ಯಲ್ಲಿ 600 ಅಂಕ ಗಳಿಸಿದ ಹರ್ಷೀತ್ ರವರನ್ನು ಹಾಗೂ ಜಿಲ್ಲಾ – ಸಮಿತಿಯ ಮಾಜಿ ಅಧ್ಯಕ್ಷ ಪ್ರಜ್ವಲ್, ಕುಮಾರ್ ಮಂಗಳೂರು, ಮಾಜಿ ಕೈ ಕಾರ್ಯದರ್ಶಿ ಜಯಂತ್ ಉರ್ಲಾಂಡಿ 2 ಪುತ್ತೂರು, ತಾಲೂಕು ಮಾಜಿ ಅಧ್ಯಕ್ಷ 2 ಕುಶಾಲಪ್ಪ ಗೌಡ, ಕಾರ್ಯದರ್ಶಿ ವಸಂತ್ ಪೂಜಾರಿ ಹಾಗೂ ಪ್ರಸ್ತುತ ಅಧ್ಯಕ್ಷ ವೇದಾವತಿ ಜನಾರ್ದನ, ಕಾರ್ಯದರ್ಶಿ ನಾಗೇಶ್ ಕುಮಾರ್ ಉಜಿರೆ, ಕೋಶಾಧಿಕಾರಿ ರವೀಂದ್ರ ಗೇರುಕಟ್ಟೆ ಅವರನ್ನು ಸನ್ಮಾನಿಸಲಾಯಿತು. ನಂತರ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಟೈಲರ್ ಬಾಂಧವರಿಗೆ ವಿವಿಧ ಬಗೆಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ಮತ್ತು ಬಗೆ ಬಗೆಯ ತಿಂಡಿ ತಿನಿಸುಗಳನ್ನು ಪ್ರದರ್ಶಿಸಲಾಯಿತು. ವಲಯದಲ್ಲಿ ಅತೀ ಹೆಚ್ಚು ಸದಸ್ಯತನ ನವೀಕರಣ ಮಾಡಿದವರ ಗುರುತಿಸಲಾಯಿತು. ಉಮೇಶ್ ನಡ ಪ್ರಾರ್ಥಿಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಶಾಲಪ್ಪ ಗೌಡ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಮೋಹನ್ದಾಸ್ ಅಳದಂಗಡಿ ನಿರೂಪಿಸಿದರು. ಜಿಲ್ಲಾ ಉಪಾಧ್ಯಕ್ಷೆ ಶಾಂಭವಿ ಪಿ. ಬಂಗೇರ ಧನ್ಯವಾದವಿತ್ತರು