ಶಿಶಿಲೇಶ್ವರ ದೇವಳದ ವ್ಯವಸ್ಥಾಪನ ಸಮಿತಿ ವಿಳಂಬ: ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಬೇಸರ

0

ಶಿಶಿಲ: ಧಾರ್ಮಿಕ ದತ್ತಿ ಇಲಾಖೆ ಅಡಿಯಲ್ಲಿ ಬರುವಂತಹ ಮತ್ಸ್ಯತೀರ್ಥ ಶ್ರೀ ಶಿಶಿಲೇಶ್ವರ ದೇವಸ್ಥಾನವು ಅತಿ ಹೆಚ್ಚು ಪ್ರವಾಸಿಗರು ಬರುವಂತಹ (ಎ ಗ್ರೇಡ್ )ಧಾರ್ಮಿಕ ಕ್ಷೇತ್ರವಾಗಿದೆ. ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಅವರು ವಿಪರ್ಯಾಸ ಎಂದರೆ ಈಗಿನ ಕಾಂಗ್ರೆಸ್ ಸರಕಾರ ಈವರೆಗೂ ಆಡಳಿತ ಸಮಿತಿ ಮಾಡದೆ ಮೀನಾ ಮೇಷ ಎಣಿಸುತ್ತಿದೆ. ತೀವ್ರ ಮಳೆಯಿಂದ ಶಿಶಿಲೇಶ್ವರ ದೇವಸ್ಥಾನದಲ್ಲಿ ಅಪಾರ ಹಾನಿಯಾಗಿದ್ದು ಇದರ ಜವಾಬ್ದಾರಿ ತೆಗೆದುಕೊಳ್ಳಲು ಯಾವುದೇ ಆಡಳಿತ ಮಂಡಳಿ ಇಲ್ಲದಂತಾಗಿದೆ ಹಿಂದೂ ಧಾರ್ಮಿಕ ಶ್ರದ್ಧ ಕೇಂದ್ರವನ್ನು ಈ ರೀತಿ ನಿರ್ಲಕ್ಷಿಸುವುದು ಸರಿಯಾದ ಕ್ರಮವಲ್ಲ. ಕೂಡಲೇ ಸಂಬಂಧಪಟ್ಟ ಧಾರ್ಮಿಕ ಪರಿಷತ್ ಮುಜರಾಯಿ ಸಚಿವರು ಗಮನ ಹರಿಸಿ ಆಡಳಿತ ಸಮಿತಿಯನ್ನು ನೇಮಿಸಬೇಕು ಎಂದು ಹೇಳಿದರು.

LEAVE A REPLY

Please enter your comment!
Please enter your name here