ಕೊಕ್ಕಡ: ಬೋಳದಬೈಲು ತನ್ವೀರುಲ್ ಇಸ್ಲಾಂ ಮದ್ರಸ ಬೋಳದಬೈಲು ಎಸ್.ಕೆ.ಎಸ್.ಬಿ.ವಿ (SKSBV) ಹಾಗೂ ಎಸ್.ಕೆ.ಎಸ್.ಎಸ್.ಎಫ್ (SKSSF) ವತಿಯಿಂದ ಸಮಸ್ತ 100ನೇ ಸ್ಥಾಪಕ ದಿನ ಹಾಗೂ ಮಾನಿಯೂರು ಉಸ್ತಾದ್ ಅನುಸ್ಮರಣೆ ಜೂ. 26ರಂದು ಬೆಳಿಗ್ಗೆ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಧ್ವಜಾರೋಹಣ, ಕುರಾನ್ ಪಾರಾಯಣ, ಪ್ರಾರ್ಥನೆ, ಕ್ವಿಝ್, ಸಂದೇಶ ಭಾಷಣ ನಡೆಯಿತು. ಕ್ವಿಝ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಮುಹಮ್ಮದ್ ಬಾಯಿಷ್ 9ನೇ ತರಗತಿ, ದ್ವಿತೀಯ ಸ್ಥಾನ ಪಡೆದ ಮುಹಮ್ಮದ್ ಅನಸ್ 5ನೇ ತರಗತಿ ಗಳಿಸಿದ್ದರು. ಸ್ಥಳ ಖತೀಬರಾದ ಮುಸ್ತಫ ಫೈಝಿ ಕರಾಯ ಸಂದೇಶ ಭಾಷಣ ನಡೆಸಿ ಸಮಸ್ತ ಉಲಮಾ ನೇತಾರರ ಜೀವನ ಚರಿತ್ರೆ ಅವರು ಬಂದ ದಾರಿ, ಸಮಸ್ಥದ ಅನಿವಾರ್ಯತೆ ಎಂಬ ವಿಷಯಗಳ ಕುರಿತು ಗಹನವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಮದ್ರಸ ಅಧ್ಯಾಪಕ ಖಾಸಿಂ ಮುಸ್ಲಿಯಾರ್ ತಿಂಗಲಾಡಿ ಪ್ರಾರ್ಥನೆ ನಿರ್ವಹಿಸಿದರು. ಹಾಗೂ ರಿಫಾಯಿಯ್ಯ ಸುನ್ನಿ ಜುಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಅಶ್ರಫ್ ಬಿ.ಕೆ. ಅಧ್ಯಕ್ಷ ಸ್ಥಾನ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಬಿ.ಕೆ. ಹಾಗೂ ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಹಾರಿಸ್ ಬಿ.ಕೆ., ಪ್ರದಾನ ಕಾರ್ಯದರ್ಶಿ ಅಬೂಬಕ್ಕರ್ ಬಿ.ಕೆ., ಸದಸ್ಯರಾದ ಇಸ್ಹಾಕ್ ಬಿ.ಕೆ., ಮುಸ್ತಫ, ಹಮೀದ್, ಯೂಸುಫ್, ಸಜ್ಜಾದ್, ಶಂಶೀರ್, ಮದ್ರಸ ವಿದ್ಯಾರ್ಥಿಗಳು ಮುಂತಾದವರು ಉಪಸ್ಥಿತರಿದ್ದರು. ಕೊನೆಯಲ್ಲಿ ಸಿಹಿತಿಂಡಿ ವಿತರಿಸಿ ಮೂರು ಸ್ವಲಾತಿನೊಂದಿಗೆ ಕಾರ್ಯಕ್ರಮ ಕೊನೆಗೊಂಡಿತ್ತು.