ಧರ್ಮಸ್ಥಳ: ಮುಂಡ್ರುಪ್ಪಾಡಿ ಶಾಲೆಯ ಅಕ್ಷರ ದಾಸೋಹ ಕಾರ್ಯಕ್ಕೆ ಸಹಕಾರಿಯಾಗುವ 12ಲೀಟರ್ ಸಾಮರ್ಥ್ಯದ ಕುಕ್ಕರ್ ಅನ್ನು ಹರೀಶ್ ಉಜಿರೆ ಅವರು ಕೊಡುಗೆಯಾಗಿ ನೀಡಿದರು. ಕುಕ್ಕರ್ ನ್ನು ಶಾಲೆಯ ಮುಖ್ಯ ಶಿಕ್ಷಕಿ ಚಿತ್ರಪ್ರಭಾ ಅವರಿಗೆ ಹಸ್ತಾಂತರ ಮಾಡಿದರು. ಹರೀಶ್ ಉಜಿರೆ ಅವರಿಗೆ ಶಾಲೆ ಹಾಗೂ ಎಸ್.ಡಿ.ಎಮ್.ಸಿ ಪರವಾಗಿ ಶಾಲಾ ಮುಖ್ಯ ಶಿಕ್ಷಕಿ ಚಿತ್ರಪ್ರಭಾ ಧನ್ಯವಾದ ತಿಳಿಸಿದ್ದಾರೆ.