ಪುದುವೆಟ್ಟು: ಕರ್ನಾಟಕ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು 2 ವರ್ಷಗಳಾದರೂ ಸುಸೂತ್ರವಾಗಿ ಆಡಳಿತ ನಡೆಸದೆ ಭೂಮಾಫಿಯ, ಪಟ್ಟಭದ್ರ ಹಿತಾಸಕ್ತಿಗಳಿಂದ ಜನರಿಗೆ ಸುಲಭ ರೀತಿಯ ಸೇವೆ ದೊರಕದೆ ಭಷ್ಟಚಾರದ ಕೂಪದಿಂದ ಸ್ರೀ ಸಾಮಾನ್ಯರ ಹಣ ದೋಚಲು ಅವೈಜ್ಞಾನಿಕ ನಿಯಮ ರೂಪಿಸಿ ಅಲೆದಾಟದ ಭಾಗ್ಯ ಒದಗಿಸಿರುವುದನ್ನು ಹಾಗೂ
9/11 ನಿವೇಶನಗಳ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ, ಅಕ್ರಮ ಸಕ್ರಮ ತಿರಸ್ಕರಿಸುವುದನ್ನು ಖಂಡಿಸಿ, ಬಡವರ ಅಶ್ರಯ ಮನೆಗಳ ಮಂಜೂರಾತಿ ಮತ್ತು ಅನುದಾನ ಬಿಡುಗಡೆಗೆ ಒತ್ತಾಯಿಸಿ, ವೃದ್ಯಾಪ ವೇತನ, ಸಂಧ್ಯಾ ಸುರಕ್ಷಾ ಹಣ ಬಿಡುಗಡೆಗೆ ಒತ್ತಾಯಿಸಿ, ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸಿದ್ದನ್ನು ವಿರೋಧಿಸಿ, ವಿದ್ಯುತ್ ದರ ಏರಿಕೆಯನ್ನು ಖಂಡಿಸಿ, ಗೃಹ ನಿರ್ಮಾಣಕ್ಕೆ ಪೂರಕವಾದ ಮರಳು ಹಾಗೂ ಕೆಂಪುಕಲ್ಲು ಸಾಗಾಣಿಕೆ ನಿರ್ಬಂಧ ರದ್ದತಿಗೆ ಆಗ್ರಹಿಸಿ, ಭಾರತೀಯ ಜನತಾ ಪಾರ್ಟಿ ಪುದುವೆಟ್ಟು ಗ್ರಾ. ಪಂಚಾಯತ್ ಮುಂದೆ ಜೂ.23ರಂದು ಪ್ರತಿಭಟನೆ ನಡೆಸಿದರು.

ಅಧ್ಯಕ್ಷ ಪೂರ್ಣಾಕ್ಷ, ಹಿಂದುಳಿದ ವರ್ಗ ಜಿಲ್ಲಾ ಪ್ರದಾನ ಕಾರ್ಯದರ್ಶಿ, ಬೂತ್ ಸಮಿತಿ ಅಧ್ಯಕ್ಷರುಗಳಾದ ನಿತ್ಯಾನಂದ ಗೌಡ, ಸೋಹಿ, ಚಂದ್ರಹಾಸ ಗೌಡ, ಸದಸ್ಯರಾದ ಶೀಲಾವತಿ, ಆನಂದ ಗೌಡ, ಭರತ್ ಕುಮಾರ್, ನವೀನ್, ಹಾಲು ಸೊಸೈಟಿ ಅಧ್ಯಕ್ಷರುಗಳಾದ ರಂಗನಾಥ್, ಸಜು, ಸಿ.ಎ ಬ್ಯಾಂಕ್ ನಿರ್ದೇಶಕರುಗಳಾದ ಪ್ರಸನ್ನ ಹೆಬ್ಬಾರ್, ಪಂ. ಸದಸ್ಯರಾದ ಭಾಸ್ಕರ, ಜಯಲಕ್ಷ್ಮಿ, ಲಲಿತಾ, ಇಂದಿರಾ, ಅಪ್ಪಿ, ವನಿತಾ, ಹಾಗೂ ಇತರರು ಭಾಗವಹಿಸಿದರು.