ಬೆಳ್ತಂಗಡಿ: ಜಗತ್ತಿಗೆ ಭಾರತ ನೀಡಿದ ಉನ್ನತ ಕೊಡುಗೆ ಎಂದರೆ ಯೋಗ. ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಹಾಗೂ ಇವೆರಡನ್ನು ಸಮತೋಲನದಲ್ಲಿರಿಸುವ ಪ್ರಾಚೀನ ಕಲೆ ಯೋಗ. ಪ್ರತಿನಿತ್ಯ ಯೋಗವನ್ನು ಅಭ್ಯಾಸ ಮಾಡುವಾತನಿಗೆ ಯಾವುದೇ ದೈಹಿಕ ಕಾಯಿಲೆಗಳು ಬಾಧಿಸುವುದಿಲ್ಲ ಹಾಗೆ ಮಾನಸಿಕ ಆರೋಗ್ಯ ಕೂಡ ಸ್ಥಿರವಾಗಿರುತ್ತದೆ ಎಂದು ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕ ಚಂದ್ರಶೇಖರ ಶೇಟ್ ನುಡಿದರು. ಜೂ.21ರಂದು ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಪಟ್ರಮೆ ಗ್ರಾಮದ ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ನಡೆದ ಯೋಗ ದಿನಾಚರಣೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಯೋಗಾಸನದ ಭಂಗಿಗಳನ್ನು ತಿಳಿಸಿಕೊಟ್ಟರು. ಶಾಲೆಯ ಯೋಗ ಶಿಕ್ಷಣದ ಪ್ರಮುಖರಾದ ಶುಭಲಕ್ಷ್ಮಿ ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿದ್ದರು, ಶಿಕ್ಷಕರು ಸಹಕರಿಸಿದರು.