ಶಿಬಾಜೆ: ಅಂಗನವಾಡಿ ಕೇಂದ್ರದಲ್ಲಿ ನೂತನವಾಗಿ ಎಲ್.ಕೆ.ಜಿ-ಯು.ಕೆ.ಜಿ ತರಗತಿ ಜೂ. 23ರಂದು ಶುಭಾರಂಭಗೊಂಡಿತು.
ಎಲ್. ಕೆ. ಜಿ -ಯು. ಕೆ. ಜಿ ಶುಭಾರಂಭ ಕಾರ್ಯಕ್ರಮದ ಉದ್ಘಾಟನೆಯನ್ನು ಹತ್ಯಡ್ಕ ಸಿಎ ಬ್ಯಾಂಕ್ ಅಧ್ಯಕ್ಷ ರಾಘವೇಂದ್ರ ನಾಯಕ್ ನೆರವೇರಿಸಿ ಮಕ್ಕಳಿಗೆ ಶುಭಾಶಯ ತಿಳಿಸಿದರು. ಪಂಚಾಯತ್ ಅಧ್ಯಕ್ಷೆ ರತ್ನ, ಉಪಾಧ್ಯಕ್ಷ ದಿನಕರ್ ಕುರುಪ್, ಸದಸ್ಯರಾದ ರತೀಶ್ ಬಿ., ವಿನಯಚಂದ್ರ ಟಿ., ವನಿತಾ ವಿ. ಶೆಟ್ಟಿಗಾರ್, ಬಾಲವಿಕಾಸ ಸಮಿತಿ ಅಧ್ಯಕ್ಷೆ ಇಂದಿರಾ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಕೊಕ್ಕಡ ವಿಭಾಗದ ಮೇಲ್ವಿಚಾರಕಿ ಅನ್ನಪೂರ್ಣ, ಗ್ರಾಮದ ಹಿರಿಯರಾದ ಕೃಷ್ಣಪ್ಪ ಬಿ., ಪುರಂದರ ರಾವ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಅಜಿತಾ ಸ್ವಾಗತ ಭಾಷಣ ಮಾಡಿ ಧನ್ಯವಾದವಿತ್ತರು.