ಬೆಳ್ತಂಗಡಿ: ಅಂತರಾಷ್ಟ್ರೀಯ ಯೋಗ ದಿನವನ್ನು ಜೂ.21ರಂದು ಮಂಗಳೂರಿನ ಎಸ್.ಸಿ.ಎಸ್. ಆಸ್ಪತ್ರೆಯ ಸಭಾಂಗಣದಲ್ಲಿ ಆಯೋಜಿಸಲಾಯಿತು. ಯೋಗ ಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಮತ್ತು ಆಸ್ಪತ್ರೆಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಜೀವರಾಜ್ ಸೊರಕೆ ಅವರು ಯೋಗ ದಿನಾಚರಣೆಗೆ ಚಾಲನೆ ನೀಡಿದರು. ಯುವ ಪೀಳಿಗೆಯು ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳುವುದು ಹಾಗೂ ತಮ್ಮ ಜೀವನಶೈಲಿಯನ್ನು ಯೋಗಾಭ್ಯಾಸದ ಮೂಲಕ ಸುಧಾರಿಸುವ ನಿಟ್ಟಿನಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ಅತ್ಯಂತ ಉತ್ಸಾಹಭರಿತರಾಗಿ ಯೋಗ ದಿನದಲ್ಲಿ ಪಾಲ್ಗೊಂಡರು.


ಅಂತರಾಷ್ಟ್ರೀಯ ಯೋಗ ಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರ ನೇತೃತ್ವದಲ್ಲಿ ಯೋಗ ತರಬೇತಿ ಆಯೋಜಿಸಲಾತ್ತು. ಕಳೆದ 47 ವರ್ಷಗಳಿಂದ ಮೂರೂವರೆ ಲಕ್ಷಕ್ಕೂ ಅಧಿಕ ಜನರಿಗೆ ಉಚಿತ ಯೋಗ ತರಬೇತಿ ನೀಡಿ ಅತ್ಯುತ್ತಮ ಸೇವೆಯನ್ನು ಅವರು ನೀಡುತ್ತಾ ಬಂದಿದ್ದಾರೆ. ಅಂತಾರಾಷ್ಟ್ರೀಯ ಯೋಗ ಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರ ನೇತೃತ್ವದಲ್ಲಿ ಯೋಗ ತರಬೇತಿ ಆಯೋಜಿಸಲಾತ್ತು.

ಕಳೆದ 47 ವರ್ಷಗಳಿಂದ ಮೂರೂವರೆ ಲಕ್ಷಕ್ಕೂ ಅಧಿಕ ಜನರಿಗೆ ಉಚಿತ ಯೋಗ ತರಬೇತಿ ನೀಡಿ ಅತ್ಯುತ್ತಮ ಸೇವೆಯನ್ನು ಅವರು ನೀಡುತ್ತಾ ಬಂದಿದ್ದಾರೆ. ಆಸ್ಪತ್ರೆಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಜೀವರಾಜ್ ಸೊರಕೆ ಅವರು ಸಿಬ್ಬಂದಿ ವರ್ಗವನ್ನು ಉದ್ದೇಶಿಸಿ ಮಾತನಾಡಿ, “ಪ್ರಸ್ತುತ ಸಮಾಜದಲ್ಲಿ ಬಹುತೇಕ ಜನರು ಒತ್ತಡಭರಿತ, ಆತಂಕ ಹಾಗೂ ಅಸಮತೋಲಿತ ಜೀವನಶೈಲಿಯಿಂದ ಬಳಲುತ್ತಿದ್ದಾರೆ.

ಇದರಿಂದ ಭಾರೀ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಿಯಮಿತ ಯೋಗಾಭ್ಯಾಸದಿಂದ ವ್ಯಕ್ತಿಯು ತನ್ನ ಅಂತರಂಗದ ಜೊತೆಗೆ ಸಂಪರ್ಕ ಸಾಧಿಸಲು, ಮಾನಸಿಕ ಸಮತೋಲನವನ್ನು ಹಿಂಪಡೆದುಕೊಳ್ಳಲು ಹಾಗೂ ಆರೋಗ್ಯವನ್ನು ಸುಧಾರಿಸಲು ಸಹಾಯಕವಾಗುತ್ತದೆ. ಯೋಗ ನಮ್ಮ ಮನೋವೈಕಲ್ಯ ಹಾಗೂ ಮಾನಸಿಕ ಕಳವಳವನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ಶಾರೀರಿಕ ದೌರ್ಬಲ್ಯದಿಂದ ದೂರವಿರಲು ಸಹಾಯಕವಾಗುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಯುವಜನತೆಯನ್ನು ಯೋಗಾಭ್ಯಾಸದಲ್ಲಿ ತೊಡಗುವಂತೆ ಹುರಿದುಂಬಿಸಲಾಗುತ್ತದೆ. ನಿರಂತರ ಯೋಗಾಭ್ಯಾಸವು ಆರೋಗ್ಯ ಮತ್ತು ಸಂತೋಷ ನೆಮ್ಮದಿಗೆ ದಾರಿ” ಎಂದು ಕಿವಿಮಾತು ಹೇಳಿದರು.