ಬೆಳ್ತಂಗಡಿ: ಯೂನಿಯನ್ ಬ್ಯಾಂಕ್ ವತಿಯಿಂದ ಕೃಷಿ ಅಭಿವೃದ್ಧಿ ಜನಸಂಪರ್ಕ ಶಿಬಿರವು ಜೂ.19ರಂದು ಅಂಬೇಡ್ಕರ್ ಭವನದಲ್ಲಿ ಜರುಗಿತು.

ಶಿಬಿರವನ್ನು ಯೂನಿಯನ್ ಬ್ಯಾಂಕಿನ ಉಪ ಪ್ರಾದೇಶಿಕ ಮುಖ್ಯಸ್ಥ ಶಶಿಕುಮಾರ್ ಎ. ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಆರ್.ಎ.ಬಿ.ಡಿ ಮುಖ್ಯಸ್ಥ ದಿನೇಶ್ ಎಚ್.ಕೆ., ಕೃಷಿ ಅಧಿಕಾರಿ ನವನೀತ, ಪಶು ವೈದ್ಯಕೀಯ ಸಹಾಯಕ ನಿರ್ದೇಶಕ ಡಾ. ರವಿಕುಮಾರ್, ಎನ್.ಆರ್.ಎಲ್. ಮುಖ್ಯಸ್ಥ ನಿತೇಶ್ ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.