ಬೆಳ್ತಂಗಡಿ: ತಾಲೂಕಿನ ಬಗರ್ ಹುಕ್ ಅಕ್ರಮ ಸಕ್ರಮ ಸಮಿತಿಯ ಸಭೆಯನ್ನು ಜೂ.17ರಂದು ಶಾಸಕ ಹರೀಶ್ ಪೂಂಜ ತಾಲೂಕು ಆಡಳಿತ ಸೌಧದಲ್ಲಿ ನಡೆಸಿದರು.

ರಾಜ್ಯ ಸರಕಾರದ ನೂತನ ತಂತ್ರಜ್ಞಾನದ ಆಧಾರದಂತೆ ಅರ್ಹ ಅರ್ಜಿದಾರರುಗಳ ಕಡತಗಳನ್ನು ವಿಲೇವಾರಿಗೊಳಿಸಲಾಯಿತು. ತಹಶೀಲ್ದಾರ್ ಪೃಥ್ವಿ ಸಾನಿಕಂ, ಸಮಿತಿಯ ಸದಸ್ಯರಾದ ಆಯುಬ್ ಡಿ.ಕೆ, ಶ್ರೀಧರ್ ಕಳೆಂಜ, ವಿನುತಾ ರಜತ್ ಗೌಡ ಉಪಸ್ಥಿತರಿದ್ದರು.