ವೇಣೂರು: ಸನಾತನ ಸಂಸ್ಕೃತಿಯ ಆಧಾರ ಕುಟುಂಬ ವ್ಯವಸ್ಥೆ ಕೌಟುಂಬಿಕ ವ್ಯವಸ್ಥೆ ಭದ್ರವಾದಾಗ ಸನಾತನ ಸಂಕೃತಿ ಉಳಿವು ಸಾಧ್ಯ ಎಂದು ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷ ತಾರಾನಾಥ ಕೊಟ್ಟಾರಿ ಹೇಳಿದರು. ಅವರು ಜೂ. 15ರಂದು ವೇಣೂರಿನ ಬಜಿರೆ ಹಲ್ಲಂದೋ ಬಸದಿಯಲ್ಲಿ ನಡೆದ ಸಂಸ್ಕಾರ ಸಿಂಧೂರ ಸನಾತನ ಸಂಸ್ಕೃತಿಯ ಮೆಲುಕು ಪಂಚ ಪರಿವರ್ತನಾ ಚಿಂತಾನ ಶಿಬಿರದ ಕಾರ್ಯಕ್ರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸನಾತನಿಗಳಾದ ನಾವು ನಮ್ಮ ಕುಟುಂಬ ವ್ಯವಸ್ಥೆ ಬಲಗೊಳಿಸಿದಾಗ ಸಾಮರಸ್ಯದೊಂದಿಗೆ ಸ್ವದೇಶೀ ಬಳಕೆ ಹಾಗೂ ಪರಿಸರ ಸಂರಕ್ಷಣೆ ಕಾರ್ಯ ಸಾಧ್ಯ ಎಂದು ತಿಳಿಸಿದರು. ಪ್ರವೀಣ್ ಚಂದ್ರ ಜೈನ್ ಅವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಶ್ರೀಪತಿ ಬೆಂಗಳೂರು, ಚಂದ್ರಶೇಖರ ಶೆಟ್ಟಿ ಮಂಗಳೂರು, ನಾಗರಾಜ ಶೆಟ್ಟಿ, ಪ್ರಾಂತ ಸಹ ಕಾರ್ಯದರ್ಶಿ, ಉದ್ಯಮಿ ಭಾಸ್ಕರ ಪೈ ಹಾಗೂ ವಿಜಯ ಬಿ. ಶೆಟ್ಟಿ, ಜಿಲ್ಲಾ ಕೋಶ ಪ್ರಮುಖರು, ಗೌರಾವಾಧ್ಯಕ್ಷ ಸರಪಾಡಿ ಅಶೋಕ್ ಶೆಟ್ಟಿ ಗೌರವ ಉಪಸ್ಥಿತರಿದ್ದರು. ಸಂಯೋಜಕ ಮನ್ಮಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಡಾ. ವಾರಿಜಾ ನಿರ್ಬೈಲು ಹಾಗೂ ಶಿಷ್ಯೆಯರಿಂದ ತೊರವೆ ರಾಮಾಯಣದ ಕಿಷ್ಕಿಂದಾ ಕಾಂಡದಿಂದ ಆಯ್ದ ಸ್ವಯಂಪ್ರಭೆ ಎನ್ನುವ ಕಥಾಭಾಗದ ಗಮಕ ವಾಚನವು ನಡೆಯಿತು. ಮುಂದೆ ನಡೆದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಜನನದಿಂದ ಮರಣದ ವರೆಗಿನ ಆಚರಣೆಗಳಲ್ಲಿನ ಬದಲಾವಣೆಗಳ ಕುರಿತು ಸುರೇಶ ಪರ್ಕಳ, ವಿಭಾಗ ಪ್ರಮುಖ್, ಸಾಮರಸ್ಯ ಟೋಳಿ, ಇವರು ತಮ್ಮ ಅನಿಸಿಕೆಗಳನ್ನು ಮಂಡಿಸಿದರು. ಮಾನವನಲ್ಲಿರುವ ಮನುಷ್ಯತ್ವ, ಮಾನವೀಯತೆಗಳೇ ಧರ್ಮ, ನಂಬಿಕೆ, ಮೂಲನಂಬಿಕೆ, ಮೂಢನಂಬಿಕೆಗಳಿಂದ ನಂಬಿಕೆಗಳ ಮೂಲತತ್ವವೇ ಮರೆಯುವಂತಾಗಿದೆ. ಜನರ ಮೌಢ್ಯತೆಯಿಂದಾಗಿ ನಮ್ಮ ದೇಶವು ಅನೇಕ ಸಮಸ್ಯೆಗಳಿಗೆ ಒಳಗಾಗಿದೆ. ಬದಲಾವಣೆಯು ಜಗದ ನಿಯಮ. ಹಿಂದೂ ಧರ್ಮವು ಸಾವಿರಾರು ವರ್ಷಗಳಿಂದ ತನ್ನನ್ನು ಬದಲಾವಣೆಗಳಿಗೆ ಒಡ್ಡಿಕೊಂಡಿದೆ ಇದು ಅನಿವಾರ್ಯವೂ ಹೌದು. ಹಾಗೆಯೇ, ಇಂದಿನ ವಿಜ್ಞಾನ ಯುಗದಲ್ಲಿ, ಮೊಬೈಲ್, ಫ್ರಿಜ್ ನಂತಹ ನೂರಾರು ಯಾಂತ್ರೀಕೃತ ವಸ್ತುಗಳು ಬಳಕೆಯಲ್ಲಿರುವುದನ್ನು ಕಾಣಬಹುದು. ಅವುಗಳ ಬಳಕೆಯ ನಿಯಂತ್ರಣ ನಮ್ಮ ಕೈಯಲ್ಲೇ ಇದೆ ಎನ್ನುತ್ತಾ ಕೇಳುಗರನ್ನು ಚಿಂತನೆಗೆ ಹಚ್ಚಿದರು.
ಪ್ರೊ. ದತ್ತಾತ್ರೇಯ ರಾವ್, ಜಿಲ್ಲಾ ಉಪಾಧ್ಯಕ್ಷರು, ರಘವೀರ ಗಟ್ಟಿ, ಪ್ರಾಂತ ಕೋಶ ಪ್ರಮುಖ್, ಶಂಕರಿ ಶರ್ಮ, ಜಿಲ್ಲಾ ಸಾಹಿತ್ಯ ಸಂಯೋಜಕಿ, ಇವರೆಲ್ಲರ ಗೌರವ ಉಪಸ್ಥಿತರಿದ್ದರು. ಎರಡನೇ ಅವಧಿಯಲ್ಲಿ ಸರಪಾಡಿ ಅಶೋಕ ಶೆಟ್ಟಿ, ಜಿಲ್ಲಾ ಗೌರವಾಧ್ಯಕ್ಷ ಮಂಥನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ರಾಷ್ಟ್ರ ಮತ್ತು ಧರ್ಮ ರಕ್ಷಣೆಯಲ್ಲಿ ಕಲಾವಿದರ ಪಾತ್ರ ಎನ್ನುವ ವಿಷಯದ ಬಗ್ಗೆ ಸ್ವತಃ ಅದ್ಭುತ ಯಕ್ಷಗಾನ ಕಲಾವಿದರಾದ ಅವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ, ಹಲವು ವರ್ಷಗಳ ಹಿಂದೆ ಯಕ್ಷಗಾನ ಕಲೆಗೆ, ಕಲಾವಿದರಿಗೆ ಇದ್ದಂತಹ ಗೌರವ ಈ ದಿನಗಳಲ್ಲಿ ಕಾಣುತ್ತಿಲ್ಲ. ಬದಲಾವಣೆಯ ನೆಪದಲ್ಲಿ ಕಲೆ ಹಾದಿ ತಪ್ಪುತ್ತಿದೆ. ತಪ್ಪಿದ್ದಲ್ಲಿ ಕಲಾವಿದರನ್ನು ಎಚ್ತರಿಸಿ, ಕಲೆಯ ಪಾವಿತ್ರ್ಯತೆಯನ್ನು ಉಳಿಸಿ ಬೆಳೆಸಬೇಕಾದವರು ಪ್ರೇಕ್ಷಕರು ಎಂದು ಸಭಿಕರನ್ನು ಸ್ವವಿಮರ್ಶೆಗೆ ಹಚ್ಚಿದರು.
ಜಿಲ್ಲಾ ಪಾರಂಪರಿಕ ಕಲಾ ಸಂಯೋಜಕಿ ಡಾ. ವಾರಿಜ ನಿರ್ಬೈಲು, ಜಿಲ್ಲಾ ಕಾರ್ಯದರ್ಶಿ ಶಶಿಕುಮಾರ್ ಇಂದ್ರ, ಜಿಲ್ಲಾ ಉಪಾಧ್ಯಕ್ಷ ಅನಿಲ್ ಪಂಡಿತ್, ಜಿಲ್ಲಾ ದೃಶ್ಯ ಕಲಾ ಸಂಯೋಜಕ ಅಶೋಕ ಮಡಂತ್ಯಾರು ಗೌರವ ಉಪಸ್ಥಿತರಿದ್ದರು.
ಅತಿಥೇಯರಾದ ಶಶಿಕುಮಾರ್ ಅವರ ಸುಪುತ್ರಿ ವಿದುಷಿ ಶ್ರವಣ ಕುಮಾರಿ, ಸನಾತನ ನಾಟ್ಯಾಲಯ ಇವರಿಂದ ನಾಗೇಂದ್ರ ಹಾರಾಯ ತ್ರಿಲೋಚನಾಯ ಎಂಬ ಹಾಡಿಗೆ ಪ್ರದರ್ಶಿಸಲ್ಪಟ್ಟ ಅದ್ಭುತ ಶಾಸ್ತ್ರೀಯ ನೃತ್ಯವು ಆಗಮಿಸಿದರ ಕಣ್ಮನ ತಣಿಸಿತು. ಪುತ್ತೂರಿನ ವಿದುಷಿ ನಯನಾ ವಿ. ರೈ ಅವರ ಶಿಷ್ಯೆಯರು ಹಾಗೂ ವಿದ್ವಾನ್ ದೀಪಕ್ ಕುಮಾರ್ ಇವರ ನಿರ್ದೇಶನ ಹಾಗೂ ವಿದುಷಿ ಪ್ರೀತಿಕಲಾ ಇವರ ನೇತೃತ್ವದಲ್ಲಿ ಅವರ ಶಿಷ್ಯೆಯರಿಂದ ನಡೆದ ಅತ್ಯಂತ ಮೋಹಕ ನೃತ್ಯ ವೈಭವವು ನಡೆಯಿತು.ಅಪರಾಹ್ನ ನಡೆದ ಮೂರನೇ ಅವಧಿಯ ಮಂಥನವು ಕಶೆಕೋಡಿ ಸೂರ್ಯನಾರಾಯಣ ಭಟ್ಟ ನಡೆಸಿಕೊಟ್ಟರು. ಕೂಡು ಕುಟುಂಬ ಪದ್ಧತಿ ಕುರಿತು ಮಾತನಾಡುತ್ತಾ, ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬಗಳಲ್ಲಿ ಇದ್ದಂತೆ ಒಂದೇ ಮನೆಯಲ್ಲಿ 50-60 ಮಂದಿ ವಾಸಿಸಲು ಇಂದಿನ ಪರಿಸ್ಥಿತಿಯಲ್ಲಿ ಸಾಧ್ಯವಾಗಲಾರದು. ಸಮಾನ ಮನಸ್ಕರು ಸೇರಿ, ಒಟ್ಟುಗೂಡಿ ಆನಂದಿಸುವ ಇಂತಹ ಸಭೆಯೂ ಒಂದು ಕೂಡು ಕುಟುಂಬವೇ ಆಗಿದೆ ಎಂದು ಜಗತ್ತೇ ಒಂದು ಕುಟುಂಬ ಎಂಬುದನ್ನು ನೆನಪಿಸಿದರು. ರೂಪಲೇಖಾ, ಪ್ರಾಂತ ಉಪಾಧ್ಯಕ್ಷರು, ಸಂಪತ್ ಬಿ. ಸುವರ್ಣ, ಜಿಲ್ಲಾ ಉಪಾಧ್ಯಕ್ಷರು, ವಿದ್ವಾನ್ ದೀಪಕ್ ಕುಮಾರ್, ಜಿಲ್ಲಾ ಪ್ರದರ್ಶಕ ಕಲಾ ಸಂಯೋಜಕರು ಗೌರವ ಉಪಸ್ಥಿಯನ್ನು ನೀಡಿದರು.
ಸಮಾರೋಪ ಸಮಾರಂಭದಲ್ಲಿ ಪ್ರಾಂತ ಸಂಘಟನಾ ಮಂತ್ರಿ ರಾಮಚಂದ್ರ ಬೆಂಗಳೂರು ಸಮನ್ವಯ ಮಾತುಗಳನ್ನಾಡಿದರು. ಜಿಲ್ಲಾಧ್ಯಕ್ಷ ತಾರಾನಾಥ ಕೊಟ್ಟಾರಿ ಸಮಾರೋಪ ಮಾತಾಡಿದರು. ಅತಿಥಿಗಳಾಗಿ ವೇಣೂರು ಸಹಕಾರ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ, ಡಾ! ಶಾಂತಿ ಪ್ರಸಾದ್, ಮನ್ಮಥ ಜೆ. ಶೆಟ್ಟಿ, ಜಿಲ್ಲಾ ಜಾನಪದ ಸಂಯೋಜಕ ಗಿರೀಶ್ ಕೆ.ಎಸ್., ಜಿಲ್ಲಾ ಕಾರ್ಯಕಾರಿಣಿ ಸದಸ್ಯರು, .ಪಿ.ಎನ್. ಪುರುಷೋತ್ತಮ ರಾವ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯರು, ವಿನುತಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಪಸ್ಥಿತರಿದ್ದರು. ಮಹಿಮಾ ರೈ, ಜಗದೀಶ್ ಕಡೆಗೋಳಿ ಮಹಾವೀರ್ ಜೈನ್, ಕಾರ್ಯಕ್ರಮ ನಿರೂಪಿಸಿದರು. ಶಾಂತಿ ಮಂತ್ರ ದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.