
ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರು ಎನ್ ಪದ್ಮನಾಭ ಮಾಣಿಂಜರವರು ಇತ್ತೀಚಿಗೆ ನಮ್ಮನಗಲಿದ್ದು, ಮಾ. 09ರಂದು ಯುವವಾಹಿನಿ(ರಿ.) ಬೆಳ್ತಂಗಡಿ ಘಟಕದ ವತಿಯಿಂದ ನುಡಿ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಗುರುರಾಜ್ ಗುರಿಪಳ್ಳ, ಮಾಜಿ ಅಧ್ಯಕ್ಷರಾದ ಪ್ರಶಾಂತ್ ಮಚ್ಚಿನ, ಯುವ ವಾಹಿನಿ ಮಹಿಳಾ ಸಂಚಾಲನ ಸಮಿತಿಯ ಸಂಚಾಲಕರಾದ ಲೀಲಾವತಿ ಪಣಕಜೆ , ಘಟಕದ ಕಾರ್ಯದರ್ಶಿ ಮಧುರ ರಾಘವ, ಕೋಶಾಧಿಕಾರಿ ನಾಗೇಶ್, ನಿರ್ದೇಶಕರಾದ ಯಶೋಧರ ಮುಂಡಾಜೆ, ರತನ್ ಅರಳಿ, ಶೈಲೇಶ್ ಓಡಿಲ್ನಾಳ ಪ್ರಮೀಳ ಮಾಲೂರು, ಬೇಬಿಂದ್ರ, ಪೂರ್ಣಿಮಾ, ಶಾಂಭವಿ ಮುಂಡೂರು, ಸಲಹೆಗಾರರಾದ ಸೇವಂತಿ ನಿರಂಜನ್., ಸುಧಾಮಣಿ ಆರ್, ವನಿತಾ ಜನಾರ್ಧನ್,ಹಾಗೂ ಜಯಶ್ರೀ, ರಾಜಶ್ರೀ ಶಿರ್ಲಾಲ್, ಹಾಗೂ ಮಹಿಳಾ ಸಂಚಾಲನ ಸಮಿತಿಯ ಸದಸ್ಯರು ಘಟಕದ ಸದಸ್ಯರು ಉಪಸ್ಥಿತರಿದ್ದರು.