ಉಜಿರೆ-ಪೆರಿಯಶಾಂತಿ ರಸ್ತೆ ಕಾಮಗಾರಿ ಟೆಂಡರ್ ಮುಗೋಡಿ ಕನ್ಸ್‌ಸ್ಟಕ್ಷನ್‌ಗೆ ಧರ್ಮಸ್ಥಳದಲ್ಲಿ ನಿರ್ಮಾಣವಾಗಲಿದೆ ಮೆಜೆಸ್ಟಿಕ್ ಮಾದರಿಯ ಅಂಡರ್‌ಪಾಸ್‌

0

ಬೆಳ್ತಂಗಡಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ರಾಷ್ಟ್ರೀಯ ಹೆದ್ದಾರಿ 73ರ ಉಜಿರೆ-ಪರಿಯಶಾಂತಿ ರಸ್ತೆ ಅಗಲೀಕರಣ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಮುಗಿಸಿದ್ದು ಮುಗೋಡಿ ಕನ್ ಸ್ಟಕ್ಷನ್‌ಗೆ ರಸ್ತೆ ನಿರ್ಮಾಣದ ಜವಾಬ್ದಾರಿ ವಹಿಸಿದೆ. ಹೆದ್ದಾರಿ ಸಚಿವಾಲಯ 613.65 ಕೋಟಿ ರೂಪಾಯಿ ಅನುದಾನವಿಟ್ಟಿದ್ದು ರಸ್ತೆ ನಿರ್ಮಾಣಕ್ಕೆ ಮುಗೋಡಿ ಸಂಸ್ಥೆ 315 ಕೋಟಿ ರೂಪಾಯಿಗೆ ಟೆಂಡ‌ರ್ ಹಾಕಿ ಕಾಮಗಾರಿಯ ಜವಾಬ್ದಾರಿ ವಹಿಸಿಕೊಂಡಿದೆ. ಇದಕ್ಕಾಗಿ 5 ವರ್ಷಗಳ ಅವಧಿಯನ್ನು ನಿಗದಿ ಪಡಿಸಲಾಗಿದೆ. ಏಳು ಸಂಸ್ಥೆಗಳ ಸ್ಪರ್ಧೆಯಲ್ಲಿ ಮುಗೋಡಿಗೆ ಲಭಿಸಿದ ಟೆಂಡ‌ರ್: ಉಜಿರೆ-ಪೆರಿಯಶಾಂತಿ ರಸ್ತೆ ಕಾಮಗಾರಿಗಾಗಿ ಎಂಟು ಸಂಸ್ಥೆಗಳು ಟೆಂಡರ್‌ನಲ್ಲಿ ಭಾಗಿಯಾಗಿದ್ದು ಏಳು ಸಂಸ್ಥೆಗಳು ತಾಂತ್ರಿಕ ಅರ್ಹತೆ ಪಡೆದು ತೀವ್ರ ಪೈಪೋಟಿ ನೀಡಿದ್ದವು. ಈಕೆಕೆಐ ಪ್ರೈವೆಟ್ ಲಿಮಿಟೆಡ್ 448 ಕೋಟಿ ರೂಪಾಯಿ, ಆರ್‌ಎನ್‌ಎಸ್‌ಐ 402 ಕೋಟಿ, ಉರಲುಂಗಾಲ್ ಲೇಬರ್ ಕಾಂಟ್ರಾಕ್ಟ್ ಕಾರ್ಪೋರೇಟಿವ್ ಸೊಸೈಟಿ 383 ಕೋಟಿ, ಉದಯ ಶಿವಕುಮಾರ್ ಇನ್ಹಾ ಲಿಮಿಟೆಡ್ 376 ಕೋಟಿ, ಎಸ್‌ಎಂಔತಡೆ 374 ಕೋಟಿ, ನಿತೀಶ್ ಸಾಯಿ ಸಂಸ್ಥೆ 355 ಕೋಟಿ ರೂಪಾಯಿಗೆ ಟೆಂಡರ್ ಹಾಕಿದ್ದು ಮುಗೋಡಿ ಸಂಸ್ಥೆ 315 ಕೋಟಿ ರೂಪಾಯಿಗೆ ಟೆಂಡರ್ ಹಾಕಿ ರಸ್ತೆ ನಿರ್ಮಾಣದ ಜವಾಬ್ದಾರಿ ಪಡೆದುಕೊಂಡಿದೆ

4 ಕಿಲೋಮೀಟರ್ ಚತುಷ್ಪಥ -24 ಕಿ.ಮೀ.ದ್ವಿಪಥ ರಸ್ತೆ: ಈಗಾಗಲೇ ಉದರೆ-ಪರಿಯಶಾಂತಿ ರಸ್ತೆ ಹಲವು ತಿರುವುಗಳು, ಕಡಿದಾದ ರಸ್ತೆಯನ್ನು ಅಲ್ಲಲ್ಲಿ ಹೊಂದಿದೆ. ಇವುಗಳಲ್ಲಿ ಬಹುತೇಕ ರಸ್ತೆಗಳು ನೇರವಾಗಲಿದೆ. ಅಲ್ಲದೆ 28.49 ಕಿಲೋ ಮೀಟರ್ ರಸ್ತೆಯಲ್ಲಿ ಉಜಿರೆಯ ಸಿದ್ದವನದಿಂದ ನೇತ್ರಾವತಿಯವರೆಗೆ ನಾಲ್ಕು ಕಿಲೋ ಮೀಟರ್ ಚತುಷ್ಪಥ ಮತ್ತು ಉಳಿದ 24 ಕಿಲೋ ಮೀಟರ್ ರಸ್ತೆ ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಲಾಗುತ್ತದೆ, ಇದರ ಜೊತೆಗೆ ಮಾರ್ಗದ ಎರಡೂ ಬರಿಯಲ್ಲೂ ಪೆನ್ಸ್ ಶೋಲ್ಡರ್ ಮಾದರಿಯ ವ್ಯವಸ್ಥೆಯೂ ಇರಲಿದೆ.

ಧರ್ಮಸ್ಥಳ ಮಹಾದ್ವಾರದ ಬಳಿ ನಿರ್ಮಾಣವಾಗಲಿದೆ. ಮೆಜೆಸ್ಟಿಕ್ ಮಾದರಿಯ ಅಂಡ‌ರ್ ಪಾಸ್: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಲಕ್ಷಾಂತರ ಭಕ್ತರು ಬರುತ್ತಿರುವುದರಿಂದ ಧರ್ಮಸ್ಥಳದ ಮಹಾದ್ವಾರದ ಬಳಿ ಅಂಡರ್ ಪಾಸ್ ನಿರ್ಮಾಣದ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಬೆಂಗಳೂರಿನ ಮೆಜೆಸ್ಟಿರ್ಕ್ ಮಾದನಿಯಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡಿ ಭಕ್ತರ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಬಸ್ ನಿಂದ ಇಳಿಯುವ ಭಕ್ತರು ಅಂಡರ್‌ಪಾಸ್ ಮೂಲಕ ನೇತ್ರಾವತಿ ಕಡೆಗೆ ಮತ್ತು ದೇವಸ್ಥಾನದ

ಕಡೆಗೆ ಸಾಗಲು ವ್ಯವಸ್ಥೆ ಕಲ್ಪಿಸುವ ಸಾಧ್ಯತೆಯಿದೆ. ನಿರ್ಮಾಣವಾಗಲಿದೆ ಮೂರು ದೊಡ್ಡ ಹೊಸ ಸೇತುವೆಗಳು ಮೂರು ಜಂಕ್ಷನ್: ಉಜಿರೆಯಿಂದ ಪೆರಿಯಶಾಂತಿಗೆ ಹಾದುಹೋಗುವ ರಸ್ತೆಯಲ್ಲಿ ಧರ್ಮಸ್ಥಳ ನೇತ್ರಾವತಿ, ಪಾರ್ಪಿಕಲ್ಲು ಮತ್ತು ನಿಷ್ಠೆಯಲ್ಲಿ ಮೂರು ಸೇತುವೆಗಳು ನಿರ್ಮಾಣವಾಗಲಿವೆ. ಇದರ ಜೊತೆಗೆ ಒಂದು ಚಿಕ್ಕ ಸೇತುವೆಗಳ ಕಾಮಗಾರಿ ನಡೆಯಲಿದೆ. 37 ಸ್ವಾಟ್ ಮೋದಿ, 12 ಮಾಕ್ಸ್ ಮೋದಿ, 28 ಪೈಪ್ ಕಲ್ಕಟ್ ಮೋರಿಗಳ ಕಾಮಗಾರಿ ನಡೆಯಲಿದೆ. ಇದರ ಜೊತೆಗೆ ಕ್ರಾಸ್ ರೋಡ್ ಬಾಕ್ಸ್ ಕರ್ಟ್ಸ್ಗಳ ಪೈಕಿ 45 ಹೊಸತಾಗಿ ಉಮಗಾರಿ ಮಾಡಲಾಗುತ್ತದೆ ಇದರಲ್ಲಿ ಮೂರು ಪ್ರಮುಖ ಜಂಕ್ಷನ್‌ಗಳು, 43 ಸಣ್ಣ ಜಂಕ್ಷನ್‌ಗಳನ್ನಾಗಿ ಗುರುತಿಸಲಾಗಿದೆ. ಪೇಟೆಯ ಭಾಗಗಳಲ್ಲಿ ವಿದ್ಯುದ್ದೀಪ ಅಳವಡಿಕೆ: ಎಲ್ಲಾ ಪೇಟೆ ಭಾಗ ಕನ್ಯಾಡಿ, ರಾಮಮಂದಿರ, ಸ್ನಾನಘಟ್ಟ, ಧರ್ಮಸ್ಥಳ, ನಿನ್ನೆ, ಕೊಕ್ಕಡ ಮುಂತಾದ ಭಾಗಗಳಲ್ಲಿ ವಿದ್ಯುದ್ದೀಪ ಅಳವಡಿಸಲು ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಗುಡ್ಡ ಕುಸಿತವಾಗುವ ಭೀತಿ ಇರುವಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ರಕ್ಷಣಾ ಗೋಡೆ ನಿರ್ಮಾಣದ ಕಾಡುಗಾರಿಯೂ ನಡೆಯಲಿದೆ.

ಹ್ಯಾಮ್ ಮಾದರಿಯಲ್ಲಿ ರಸ್ತೆ ಅಭಿವೃದ್ಧಿ, ಸರ್ಕಾರದ ವಶದಲ್ಲಿದೆ 66 ಶೇಕಡಾ ಭೂಮಿ: ಫೈಬ್ರಿಡ್ ಅಲ್ಬಟ ಮೋಡ್ (ಹ್ಯಾಮ್) ಮಾದರಿಯಲ್ಲಿ ಟೆಂಡರ್ ಪ್ರಕ್ರಿಯೆ ಆಗಿದ್ದು ಗುತ್ತಿಗೆದಾರರಿಗೆ ಐದು ವರ್ಷಗಳಲ್ಲಿ ಹಂತ ಹಂತವಾಗಿ ನಿರ್ವಹಿಸಿದ ಕಾಮಗಾರಿಗೆ ಬಿಲ್ ಪಾವತಿಸಲಾಗುವುದು. ರಸ್ತೆಗೆ ಬೇಕಾದ ಶೇಳಿಡು

46ರಷ್ಟು ಭೂಮಿ ಸರ್ಕಾರದ ವಾದಲ್ಲಿದ್ದು ಬಾಳಿದ ಭೂಮಿಯನ್ನು ಖಾಸಗಿದಾರರಿಂದ ಪರಿಹಾರ ನೀಡಿ ಸರ್ಕಾರ ಸ್ವಾಧೀನ ಪಡಿಸಿಕೊಳ್ಳಲಿದೆ. ಅರಣ್ಯ ಭೂಮಿಗೆ ತತ್ಸಮಾನವಾಗಿ ಅರಣ್ಯ ಭೂಮಿಯನ್ನು ಅಭಿವೃದ್ಧಿ ಪಡಿಸಲು ಬೇಕಾದ ಹೆಚ್ಚುವರಿ ಭೂಮಿ ನೀಡಿ ಅವನ್ನು ನಿಯಮಾನುಸಾರ ಪಡೆದುಕೊಳ್ಳಲು ಕೇಂದ್ರ ನಿರ್ಧರಿಸಿದೆ. ಈ ಮೂಲಕ ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆಯನ್ನು ಡಿಪಿ ಜೈನ್ ಕಂಪನಿಯಿಂದ ಬ್ಯಾಕ್ ಟು ಬ್ಯಾಕ್ ಮಾದರಿಯಲ್ಲಿ ಟೆಂಡರ್ ಪಡೆದಿರುವ ಮುಗೋಡಿ ಕನ್ಸ್ ಟ್ರಕ್ಷನ್ ಕಂಪೆನಿ ದೇಗವಾಗಿ ಕೆಲಸ ನಿರ್ವಹಿಸುತ್ತಿವೆ. ಈಗ ಮತ್ತೊಂದು ಮಹತ್ವದ ಯೋಜನೆಯ ಜವಾಬ್ದಾರಿ ಸಿಕ್ಕಿದ್ದು ಜನರು ಅಭಿವೃದ್ಧಿಯ ನಿರೀಕ್ಷೆಯಲ್ಲಿದ್ದಾರೆ

ಟೆಂಡ‌ರ್ ಪ್ರಕ್ರಿಯೆ ಪೂರ್ಣ: ಶಿವಪ್ರಸಾದ್ ಅಜಿಲ ಉಜಿರೆ-ಪರಿಯಶಾಂತಿ ರಸ್ತೆಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಟೆಂಡನರ್‌ಲ್ಲಿ ಎಂಟು ಗುತ್ತಿಗೆದಾರರು ಭಾಗಿಯಾಗಿದ್ದರು. ಅದರಲ್ಲಿ ಏಳು ಗುತ್ತಿಗೆದಾರರು ತಾಂತ್ರಿಕವಾಗಿ ಅರ್ಹತೆ ಪಡೆದು ಆ ಪೈಕಿ ಮುಗೋಡಿ ಕನ್‌ಸ್ಟ್ರಕ್ಷನ್ನ ಸುಧಾಕರ್ ಶೆಟ್ಟಿಯವರು ಹಾಕಿರುವ ಬಿಡ್ ಕಡಿಮೆ ಆಗಿರುವುದರಿಂದ ಅವರಿಗೆ ಟೆಂಡರ್ ಅನುಮೋದನೆಗೊಂಡಿದೆ. ಈ ಕಾಮಗಾರಿಯಲ್ಲಿ ನಾಲ್ಕು ಕಿಲೋ ಮೀಟರ್ ಉದ್ದದ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ, 24 ಕಿಲೋ ಮೀಟರ್ ರಸ್ತೆಯನ್ನು ದ್ವಿಪಥ ರಸ್ತೆ ಶೋಲ್ಡರ್ ನೊಂದಿಗೆ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ.- ಶಿವಪ್ರಸಾದ್ ಅಜಿಲ, ಕಾರ್ಯನಿರ್ವಾಹಕ ಅಭಿಯಂತರರು ರಾಷ್ಟ್ರೀಯ ಹೆದ್ದಾರಿ ಇಲಾಖೆ ದ.ಕ., ಕೊಡಗು

LEAVE A REPLY

Please enter your comment!
Please enter your name here