ಎಸ್. ವೈ. ಎಸ್ ಉರುವಾಲು ಪದವು ಸರ್ಕಲ್ ಮಹಾಸಭೆ

0

ಬಂದಾರು: ಎಸ್. ವೈ. ಎಸ್. ಉರುವಾಲು ಪದವು ಸರ್ಕಲ್ ಇದರ ಮಹಾಸಭೆ ಫೆ. 14ರಂದು ಹಯಾತುಲ್ ಇಸ್ಲಾಂ ಹೈ ಸೆಕೆಂಡರಿ ಮದರಸ ಹಾಲ್ ಉರುವಾಲು ಪದವಿನಲ್ಲಿ ನಡೆಯಿತು.

2025-2026ನೇ ಸಾಲಿನ ಎಸ್. ವೈ. ಎಸ್ ಉರುವಾಲು ಪದವು ಸರ್ಕಲ್ ನೂತನ ಸಮಿತಿಯನ್ನು ರಚಿಸಲಾಯಿತು. ಎಸ್. ವೈ. ಎಸ್ ನ ನೂತನ ಅಧ್ಯಕ್ಷರಾಗಿ ಮುಹಮ್ಮದ್ ರಫೀಕ್ ಝೈನಿ, ಉಸ್ತಾದ್ ಉರುವಾಲು ಪದವು ಪ್ರಧಾನ ಕಾರ್ಯದರ್ಶಿಯಾಗಿ, ಮುಹಮ್ಮದ್ ಮುಸ್ತಫಾ ಕನ್ಯಾರಕೋಡಿ ಉಪಾಧ್ಯಕ್ಷರಾಗಿ, ಅಬ್ದುಲ್ ಲತೀಫ್ ಕನ್ಯಾರಕೋಡಿ, ಕೋಶಾಧಿಕಾರಿಯಾಗಿ ಅಬ್ದುಲ್ ರಹಿಮಾನ್ ಪದ್ಮುಂಜ, ಇವರನ್ನು ನೇಮಿಸಲಾಯಿತು. ಉರುವಾಲು ಪದವು ಸರ್ಕಲ್ ಇದರ ದಅವಾ ಕಾರ್ಯದರ್ಶಿಯಾಗಿ ಮುಹಮ್ಮದ್ ಮುಸ್ತಫಾ ಮದನಿ ಉರುವಾಲು ಪದವು, ಸಾಂತ್ವನ ಹಾಗೂ ಇಸಾಬಾ ಕಾರ್ಯದರ್ಶಿಯಾಗಿ ಇಬ್ರಾಹಿಂ ಕನ್ಯಾರಕೋಡಿ ಸಂಘಟನಾ ಕಾರ್ಯದರ್ಶಿಯಾಗಿ ಶರೀಫ್ ಎನ್. ಎನ್. ಬಿ ಮುರ ಇವರನ್ನು ಆರಿಸಲಾಯಿತು. ಸದಸ್ಯರುಗಳಾಗಿ ಇಬ್ರಾಹಿಂ ಉರುವಾಲು ಪದವು, ಮುಸ್ತಫಾ ಉರುವಾಲು ಪದವು, ಅಶ್ರಫ್ ಉರುವಾಲು ಪದವು, ಅಬೂಬಕ್ಕರ್ ಎ. ಕೆ. ಕನ್ಯಾರಕೋಡಿ, ನಜೀರ್ ಪದ್ಮುಂಜ, ತೌಸೀಫ್ ಪದ್ಮುಂಜ, ಮನ್ಸೂರ್ ಪದ್ಮುಂಜ, ಅಹ್ಮದ್ ಅಲೀ ಸಅದಿ ಮುರ, ರಫೀಕ್ ತೋಟ ಮುರ, ಕರೀಮ್ ಎನ್ ಎನ್ ಬಿ ಮುರ, ಸಿದ್ದೀಕ್ ಅಂಡೆಕೇರಿ, ಅಬ್ಬಾಸ್ ಬಿ.ಟಿ. ಅಂಡೆಕೇರಿ, ಸಲೀಂ ಅಂಡೆಕೇರಿ, ರಫೀಕ್ ಬಟ್ಲಡ್ಕ, ಸೈಫುದ್ದೀನ್ ಬಟ್ಲಡ್ಕ ಇವರುಗಳನ್ನು ನೇಮಿಸಲಾಯಿತು.

LEAVE A REPLY

Please enter your comment!
Please enter your name here