ಬೆಳ್ತಂಗಡಿ: ಸೀನಿಯರ್ ಛೇಂಬರ್ ನಿಂದ ರಾಜ್ಯಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿ ವಿಜೇತ ವಿಶ್ವನಾಥ ಕೆ. ಸನ್ಮಾನ

0

ಬೆಳ್ತಂಗಡಿ: ಅಂತರಾಷ್ಟ್ರೀಯ ಸೀನಿಯರ್ ಛೇoಬರ್ ದಿನಾಚರಣೆ ಸಂಭ್ರಮಾಚರಣೆ ಅಂಗವಾಗಿ ಚಿತ್ರಕಲೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ರಾಜ್ಯಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿ ವಿಜೇತ ಗುರುವಾಯನಕೆರೆ ಸರಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ವಿಶ್ವನಾಥ ಕೆ. ವಿಟ್ಲ (ವಿ. ಕೆ. ವಿಟ್ಲ) ಇವರನ್ನು ಅವರ ಮನೆಯಲ್ಲಿ ಬೆಳ್ತಂಗಡಿ ಸೀನಿಯರ್ ಛೇoಬರ್ ಪರವಾಗಿ ಸನ್ಮಾನಿಸಲಾಯಿತು.

ಅಧ್ಯಕ್ಷ ಸೀನಿಯರ್ PPF ವಾಲ್ಟರ್ ಸಿಕ್ವೇರಾ, ಕಾರ್ಯದರ್ಶಿ ಸೀನಿಯರ್ PPF ಜಾನ್ ಅರ್ವಿನ್ ಡಿ’ಸೋಜಾ, ಸ್ಥಾಪಕಾಧ್ಯಕ್ಷ ಸೀನಿಯರ್ Csl ಡಾ.ಪ್ರಮೋದ್ ಆರ್. ನಾಯಕ್, ಪೂರ್ವಾಧ್ಯಕ್ಷ ಸೀನಿಯರ್ PPF ಲ್ಯಾನ್ಸಿ ಪಿರೇರಾ, ಸೀನಿಯರ್ PPF ವಿಶ್ವನಾಥ ಶೆಟ್ಟಿ, ಸದಸ್ಯರಾದ ಸೀನಿಯರ್ PPF ವಿಲ್ಸನ್ ಗೊನ್ಸಾಲ್ವಿಸ್, ಸೀನಿಯರ್ ದಯಾನಂದ ಕೆ., ಸೀನಿಯರ್ ಭರತ್ ಕುಮಾರ್, ಸೀನಿಯರ್ ಕಿರಣ್ ಕುಮಾರ್ ಹಾಗೂ ಸೀನಿಯರ್ ರಾಧಾಕೃಷ್ಣ ಕೆ. ಉಪಸ್ಥಿತರಿದ್ದರು.

ಸೀನಿಯರ್ PPF ಲ್ಯಾನ್ಸಿ ಪಿರೇರಾ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಸೀನಿಯರ್ Csl ಡಾ.ಪ್ರಮೋದ್ ಆರ್. ನಾಯಕ್ ಅಂತರಾಷ್ಟ್ರೀಯ ಸೀನಿಯರ್ ಛೇoಬರ್ ದಿನಾಚರಣೆಯ ವಿಶೇಷತೆಯನ್ನು ತಿಳಿಸಿದರು ಹಾಗೂ ಕಾರ್ಯದರ್ಶಿ ಸೀನಿಯರ್ PPF ಜಾನ್ ಅರ್ವಿನ್ ಡಿ’ಸೋಜಾ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here