ಬೆಳ್ತಂಗಡಿ: ಕೊಡುಗೈ ದಾನಿ ಮಾಂಜೀಲು ರಾಧಾಕೃಷ್ಣ ಹೆಬ್ಬಾರ್ ನಿಧನ

0

ಬೆಳ್ತಂಗಡಿ: ಹಿರಿಯ ಪ್ರಗತಿಪರ ಕೃಷಿಕ, ಕೊಡುಗೈ ದಾನಿ ಎಂದೇ ಹೆಸರಾಗಿದ್ದ ಪುದುವೆಟ್ಟು ನಿವಾಸಿ ಮಾಂಜೀಲು ರಾಧಾಕೃಷ್ಣ ಹೆಬ್ಬಾರ್(85 ವ) ಅ.20ರಂದು ನಿಧನರಾದರು.

ಹಲವಾರು ದಶಕಗಳ ಹಿಂದೆ ಸ್ವತಃ ಮನೆಯಲ್ಲೇ ಶಾಲೆ ಆರಂಭಿಸಿ, ಹಳ್ಳಿಯ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ್ದ ಅವರು ಜನಾನುರಾಗಿಯಾಗಿದ್ದರು. ಅವರು ಪತ್ನಿ ಸೀತಾದೇವಿ, ಪುತ್ರರಾದ ಉಜಿರೆಯ ಸ್ವಸ್ತಿ ಪೂಜಾ ಭಂಡಾರದ ಮಾಲಕ ಉಮೇಶ್ ಹೆಬ್ಬಾರ್, ಕೃಷಿಕ ವೇದವ್ಯಾಸ, ಬೆಂಗಳೂರಿನಲ್ಲಿರುವ ರಾಜೇಶ್, ಪುತ್ರಿಯರಾದ ಸೂರ್ಯಕಲಾ, ವಾಣಿಶ್ರೀ, ಸಹೋದರರಾದ ರಾಘವ ಹೆಬ್ಬಾರ್, ಶ್ರೀಪತಿ ಹೆಬ್ಬಾರ್‌, ಸಹೋದರಿ ಸತ್ಯವತಿ, ಅನುಸೂಯಾ, ಮೋಹಿನಿಯವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here