ಬೆಳ್ತಂಗಡಿ: ವಿ.ಪ. ಉಪ ಚುನಾವಣೆ ಬೆಳ್ತಂಗಡಿ ಮಂಡಲದಲ್ಲಿ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪರ ಶಾಸಕ ಹರೀಶ್ ಪೂಂಜಾ ಮತಯಾಚನೆ

0

ಬೆಳ್ತಂಗಡಿ: ವಿಧಾನ ಪರಿಷತ್ ಉಪ ಚುನಾವಣೆ ಅ.21ರಂದು ನಡೆಯಲಿದ್ದು ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಪರ ಶಾಸಕ ಹರೀಶ್ ಪೂಂಜಾರವರು ತಾಲೂಕಿನ ಹಲವು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನಪ್ರತಿನಿಧಿಗಳಲ್ಲಿ ಅ.17-18ರಂದು ಮತಯಾಚಿಸಿದರು. ಮಡಂತ್ಯಾರು, ಕುಕ್ಕೇಡಿ, ವೇಣೂರು, ಅಂಡಿಂಜೆ, ಅಳದಂಗಡಿ, ಬಳಂಜ, ಪಡಂಗಡಿ, ನಿಡ್ಲೆ ಸಹಿತ ಬೆಳ್ತಂಗಡಿ ಮಂಡಲದಲ್ಲಿ ಮತಯಾಚನೆ, ಪ್ರಚಾರ ಸಭೆ ನಡೆಯಿತು.

ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಜಯಾನಂದ ಗೌಡ ಟಿ., ಪ್ರಶಾಂತ್ ಎಂ. ಪಾರೆಂಕಿ, ಜಿಲ್ಲಾ ಕಾರ್ಯದರ್ಶಿಗಳಾದ ಸೀತಾರಾಮ ಬೆಳಾಲು, ವಸಂತಿ ಮಚ್ಚಿನ, ಮಂಡಲ ಉಪಾಧ್ಯಕ್ಷ ಕೊರಗಪ್ಪ ಗೌಡ, ಚೆನ್ನಕೇಶವ ಮುಂಡಾಜೆ ಹಾಗೂ ಮೋಹನ್ ಅಂಡಿಂಜೆ, ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಜೋಯೆಲ್ ಮೆಂಡೊನ್ಸಾ, ಮಾಜಿ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಪ್ರಮುಖರಾದ ಸಂತೋಷ್ ಜೈನ್, ಪ್ರಶಾಂತ್ ಅಳಿಂಜಾ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಹರೀಶ್ ಗೌಡ ಕೊಯಿಲ, ಪಂಚಾಯತ್ ಸದಸ್ಯರು, ಮಹಾಶಕ್ತಿ ಕೇಂದ್ರ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here