ಉಜಿರೆ: ಕಾಶಿಬೆಟ್ಟು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಕಾರು

0

ಉಜಿರೆ: ಧರ್ಮಸ್ಥಳ ರಾಷ್ಟ್ರೀಯ ಹೆದ್ದಾರಿ ಕಾಶಿಬೆಟ್ಟುವಿನಲ್ಲಿ ಕಾರೊಂದು ನಿರ್ಮಾಣ ಹಂತದ ಚರಂಡಿಗೆ ಬಿದ್ದ ಘಟನೆ ನಡೆದಿದೆ. ಈ ಘಟನೆ ಮುಂಜಾನೆ ನಡೆದಿರಬಹುದೆಂದು ಊಹಿಸಲಾಗಿದ್ದು, ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿರಬಹುದೆಂದು ಅಂದಾಜಿಸಲಾಗಿದೆ. ಕೆಂಪು ಬಣ್ಣದ ಬೆಂಗಳೂರು ನೋಂದಾವಣಿ ಕಾರು ಇದಾಗಿದ್ದು, ವಾಹನ ಚಾಲಕ ಸೇರಿದಂತೆ ಮೂವರು ಈ ಕಾರಲ್ಲಿ ಇದ್ದರು ಅನ್ನಲಾಗಿದೆ.

ಕಾರು ಬಿದ್ದ ರಭಸಕ್ಕೆ ಏರ್ ಬ್ಯಾಗ್ ತೆರೆದಿದ್ದು ಪ್ರಯಾಣಿಕರು ಅದೃಷ್ಠವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.

LEAVE A REPLY

Please enter your comment!
Please enter your name here