ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ: ರೂ.170 ಕೋಟಿ ವ್ಯವಹಾರ, ರೂ.20 ಲಕ್ಷ ಲಾಭ

0

ಶಿರ್ಲಾಲು: ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ ಸೆ.24ರಂದು ನವೋದಯ ಸಭಾಭವನ ಶಿರ್ಲಾಲು ಸಂಘದ ಅಧ್ಯಕ್ಷ ನವೀನ್ ಕೆ.ಸಾಮಾನಿ ಅಧ್ಯಕ್ಷತೆಯಲ್ಲಿ ಜರಗಿತು.

2023-24ನೇ ಸಾಲಿನಲ್ಲಿ ರೂ.170 ಕೋಟಿ ವ್ಯವಹಾರ, 20 ಲಕ್ಷ ಲಾಭ ಬಂದಿದೆ.

ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ಕೆ.ನಾರಾಯಣ ರಾವ್, ಆನಂದ ಸಾಲ್ಯಾನ್, ಸುಮಿತ್ರ ಬಿ.ಹೆಗ್ಡೆ, ಮಲ್ಲಿಕಾ, ಶಿವಪ್ಪ ಪೂಜಾರಿ, ರಾಮ ಬಂಗೇರಾ, ಯಶೋಧರ ಎನ್., ಶೀನಪ್ಪ ಎಂ., ಸುಧೀರ್, ಪಿ.ಯಚ್.ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು.

ಶಶಿಕಲಾ ಹೆಗ್ಡೆ ಪ್ರಾರ್ಥಿಸಿ, ನಿರ್ದೇಶಕ ನಾರಾಯಣ ರಾವ್ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮ್ಮಾಜಿ ಕೋಟ್ಯಾನ್ ವರದಿ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಿ, ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here