ವೇಣೂರು: ಪೆರಿಂಜೆ ನೂರುಲ್ ಹುದಾ ಮದರಸದಲ್ಲಿ ಮಕ್ಕಳಿಗೆ ಮಿಲಾದುನ್ನೆಬಿ ಪ್ರಯುಕ್ತ ಸಾಹಿತ್ಯ ಮತ್ತು ಕಲೋತ್ಸವ ಸ್ಪರ್ಧೆ

0

ವೇಣೂರು: ಪೆರಿಂಜೆ ನೂರುಲ್ ಹುದಾ ಮದರಸದ ಮಕ್ಕಳಿಗೆ ಮಿಲಾದುನ್ನೆಬಿ ಪ್ರಯುಕ್ತ ಸಾಹಿತ್ಯ ಮತ್ತು ಕಲೋತ್ಸವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮವನ್ನು ಪಡ್ಡಂದಡ್ಕ ಮಸೀದಿ ಖತೀಬ್ ಅಶ್ರಫ್ ಫೈಝಿ ಉದ್ಘಾಟಿಸಿದರು.ಸ್ವಾಗತ ಸಮಿತಿ ಅಧ್ಯಕ್ಷ ರಶೀದ್ ಅಧ್ಯಕ್ಷತೆ ವಹಿಸಿದ್ದರು.ಮೊಹಮ್ಮದ್ ಅಲ್ತಾಫ್ ಉಸ್ತಾದ್ ಪ್ರಾಸ್ತಾವಿಕವಾಗಿ ಮಾತಾಡಿದರು.

ಪಡ್ಡಂದಡ್ಕ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆ, ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಕೆ, ಪತ್ರಕರ್ತ ಎಚ್ ಮಹಮ್ಮದ್ ವೇಣೂರು, ಉದ್ಯಮಿ ಡೆಲ್ಮಾ ಅಬ್ದುಲ್ ರಹಿಮಾನ್ ಮುಖ್ಯ ಅಥಿತಿಯಾಗಿ ಶುಭ ಹಾರೈಸಿದರು.

ಪ್ರಮುಖರಾದ ಹಾಜಿ ಮೊಹಮ್ಮದ್ ಯುಕೆ, ಅಬೂಬಕ್ಕರ್, ಯಾಕೂಬು, ಯೂಸುಫ್ ಪಿಸಿ ಖಾದರ್, ಖಾದರ್ ಪೆರಿಂಜೆ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.

ಮದರಸ ಸಮಿತಿ ಅಧ್ಯಕ್ಷ ಸಾದಿಕ್ ಸ್ವಾಗತಿಸಿ, ಹನೀಫ್ ಪೆರಿಂಜೆ ಧನ್ಯವಾದವಿತ್ತರು.ಝಯಿನುದ್ದೀನ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here