ಮಡಂತ್ಯಾರು: ಪಾರೆಂಕಿ ಗ್ರಾಮದ ಹುಪ್ಪ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರೋತ್ಸವ

0

ಮಡಂತ್ಯಾರು: ಹುಪ್ಪ ಅಂಗನವಾಡಿ ಬಾಲ ವಿಕಾಸ 78ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಸಮಿತಿಯ ಅಧ್ಯಕ್ಷೆ ಮರೀನಾ ಅವಿತಾ ಪಾಯೀಸ್ ಅಧ್ಯಕ್ಷತೆಯಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯಿತು.

ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಮಡಂತ್ಯಾರು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಅಬ್ದುಲ್ ರೆಹಮಾನ್ ಪಡ್ಪು ಉಪಸ್ಥಿತರಿದ್ದು, ಮಡಂತ್ಯಾರು ರೋಟರಿ ಕ್ಲಬ್ ನ ಅಧ್ಯಕ್ಷ ನಿತ್ಯಾನಂದ ಬಿ. ಸುಪದ್ಮ ಮಾಲಾಡಿ, ಉದ್ಯಮಿಗಳಾದ ಮಹಮ್ಮದ್ ಷರೀಫ್, ಅಶ್ರಫ್ ಹುಪ್ಪ, ವಸಂತಿ ಜೆ ಆಚಾರ್ಯ, ಉಷಾ ಆಚಾರ್ಯ, ಹೇಮಾವತಿ ಶೆಟ್ಟಿ, ಲತೀಫ್, ಮಡಂತ್ಯಾರ್ ಸಿಎ ಬ್ಯಾಂಕಿನ ಸಿಬ್ಬಂದಿ ಮಹಮ್ಮದ್ ಸರ್ವನ್, ಸ್ತ್ರಿ ಶಕ್ತಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಸೌಹಾರ್ದ ಫ್ರೆಂಡ್ಸ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಅಂಗನವಾಡಿ ಕಾರ್ಯಕರ್ತೆ ಲೀಲಾವತಿ ಸ್ವಾಗತಿಸಿ, ನಿತ್ಯಾನಂದ ಬಿ ಸುಪದ್ಮ ಮಾಲಾಡಿ ಧ್ವಜಾರೋಹಣ ಗೈದರು. ಸೌಹಾರ್ದ ಫ್ರೆಂಡ್ಸ್ ಮಾಡಾಂತ್ಯಾರು ವತಿಯಿಂದ ಉಪಹಾರದ ವ್ಯವಸ್ಥೆ ಮಾಡಲಾಯಿತು ಹಾಗೂ ಅತಿಥಿಗಳು ಮಕ್ಕಳಿಗೆ ಸಿಹಿತಿಂಡಿ ವ್ಯವಸ್ಥೆಯನ್ನು ಮಾಡಿದ್ದರು. ಆಶಾ ಕಾರ್ಯಕರ್ತೆ ಉಷಾ ಅವರು ಧನ್ಯವಾದಗೈದರು.

LEAVE A REPLY

Please enter your comment!
Please enter your name here