ಧರ್ಮಸ್ಥಳ – ನಿಡ್ಲೆ ಮಾರ್ಗದಲ್ಲಿ ಕಾಡಾನೆಗೆ ಬಸ್ ಡಿಕ್ಕಿ- ಬಸ್, ಸ್ಕೂಟರ್‌ಗೆ ಹಾನಿ- ಬೋಳಿಯಾರ್ ಸಮೀಪ ಘಟನೆ

0

ಬೆಳ್ತಂಗಡಿ: ಧರ್ಮಸ್ಥಳ-ನಿಡ್ಲೆ ಮಾರ್ಗದ ಬೋಳಿಯಾರ್‌ನಲ್ಲಿ ಆ.15ರಂದು ಬೆಳಗ್ಗೆ 7.40ರ ಸಮಯದಲ್ಲಿ ಆನೆ ಓಡಾಟದಿಂದ ಎರಡು ವಾಹನಗಳಿಗೆ ಹಾನಿಯಾಗಿದೆ.

ಘಟನೆಯಲ್ಲಿ ಧರ್ಮಸ್ಥಳ-ಬೆಂಗಳೂರು ನಡುವೆ ಸಂಚರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ.ಬಸ್ ಹಾಗೂ ಒಂದು ಸ್ಕೂಟರ್‌ಗೆ ಹಾನಿಯಾಗಿದೆ.

ಧರ್ಮಸ್ಥಳ-ಕೊಕ್ಕಡ ರಸ್ತೆಯಲ್ಲಿ ಪುದುವೆಟ್ಟು ಕ್ರಾಸ್ ದಾಟಿ ಮುಂದೆ ಹೋಗುವಾಗ ಬೋಳಿಯಾರ್‌ನಲ್ಲಿರುವ ಧರ್ಮಸ್ಥಳದ ತೆಂಗಿನ ತೋಟದ ಸಮೀಪ ಕಾಡಾನೆ ರಸ್ತೆ ದಾಟುತ್ತಿರುವ ಸಂದರ್ಭ ಆಕಸ್ಮಿಕವಾಗಿ ವಾಹನಗಳಿಗೆ ಗುದ್ದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here