ಬಳಂಜ ದೇವಸ್ಥಾನದಲ್ಲಿ ನಾಗರ ಪಂಚಮಿ ಪ್ರಯುಕ್ತ ತನು ಸೇವೆ, ಕ್ಷೀರಾಭಿಷೇಕ

0

ಬಳಂಜ: ಬಳಂಜ ಶ್ರೀ ಪಂಚಲಿಂಗೇಶ್ವರ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನಾಗ ಬನದಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ನಾಗತಂಬಿಲ ತನು ಸೇವೆ,ಕ್ಷೀರಾಭಿಷೇಕ ನಡೆಯಿತು.

ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶೀತಲ್ ಪಡಿವಾಳ್, ಸತೀಶ್ ರೈ ಬಾರ್ಧಡ್ಕ, ಪ್ರಮೋದ್ ಕುಮಾರ್ ಜೈನ್ ಸಮಾಜ ಸೇವಕರಾದ ಹರೀಶ್ ವೈ ಚಂದ್ರಮ ಸೇರಿದಂತೆ ಗಣ್ಯರು ಊರ ಪರವೂರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇವೆಯಲ್ಲಿ ಭಾಗವಹಿಸಿದ್ದರು.
ಬದಿನಡೆ ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲೂ ನಾಗರ ಪಂಚಮಿ ಅಂಗವಾಗಿ ವಿಶೇಷ ಸೇವೆಗಳು ದೇವಸ್ಥಾನದ ಧರ್ಮದರ್ಶಿಗಳಾದ ಜಯ ಸಾಲಿಯಾನ್ ರವರ ನೇತೃತ್ವದಲ್ಲಿ ನಡೆಯಿತು.

ಭಕ್ತಾದಿಗಳು ಈ ಸಂದರ್ಭದಲ್ಲಿ ತಂಬಿಲ ಸೇವೆ ಅರ್ಪಿಸಿದರು. ನಾಲ್ಕೂರು ಪುಣ್ಕೆದೊಟ್ಟು ಸುಶೀಲ ಶ್ರೀಧರ್ ಪೂಜಾರಿಯವರ ನಾಗ ಬನದಲ್ಲಿ ಸಾಲಿಯಾನ್ ಕುಟುಂಬಸ್ಥರಿಂದ ತನು ಸೇವೆ ನಡೆಸಲಾಯಿತು.

LEAVE A REPLY

Please enter your comment!
Please enter your name here