ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುರಕ್ಷಾ ಕ್ರಿಟಿಕಲ್ ಇಲ್ನೆಸ್ ಫಂಡ್ ಮುಖಾಂತರ ಸಹಾಯಧನ ಹಸ್ತಾಂತರ

0

ಧರ್ಮಸ್ಥಳ: ಪೊದುಂಬಿಲ ನಾರ್ಯದಲ್ಲಿ ವಾಸವಿರುವ ವೆಂಕಪ್ಪ ಹಾಗು ಸುಶೀಲರವರ ಮಗಳು ಕುಮಾರಿ ವೇದಾವತಿಯವರು ವಾಹನ ಅಫಘಾತದಲ್ಲಿ ಗಾಯಗೊಂಡು ಎರಡು ಕಾಲಿನ ಸ್ವಾಧೀನತೆಯನ್ನು ಕಳೆದುಕೊಂಡು ಮಲಗಿದಲ್ಲಿಯೇ ಇರುತ್ತಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುರಕ್ಷಾ ಕ್ರಿಟಿಕಲ್ ಇಲ್ನೆಸ್ ಫಂಡ್ ಮುಖಾಂತರ ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆ ಮಂಜೂರು ಮಾಡಿರುವ ಸಹಾಯಧನ 20,000 ರೂಪಾಯಿಯ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಸುಂದರ ಗೌಡ ಬಜಿಲ, ಗ್ರಾಮ ಪಂಚಾಯತ್ ಸದಸ್ಯೆ ರೇವತಿ, ಒಕ್ಕೂಟದ ನೂತನ ಅಧ್ಯಕ್ಷ ರಾಜೇಶ್ ಗೌಡ ಬಜಿಲ, ಒಕ್ಕೂಟದ ಪದಾಧಿಕಾರಿಗಳಾದ ಆಲಿಷಾ, ವಲಯ ಮೇಲ್ವಿಚಾರಕರಾದ ರವೀಂದ್ರ ಬಿ ಹಾಗು ಸೇವಾಪ್ರತಿನಿಧಿ ವೀಣಾರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here