ಶಿಶಿಲ: ಬದಿಗುಡ್ಡೆಯಲ್ಲಿ ಮನೆಯ ಮೇಲ್ಛಾವಣಿ ಕುಸಿತ-ತಾತ್ಕಾಲಿಕವಾಗಿ ಸರಿಪಡಿಸಿದ ಶೌರ್ಯ ವಿಪತ್ತು ತಂಡ

0

ಶಿಶಿಲ: ಇತ್ತೀಚೆಗೆ ಸುರಿಯುತ್ತಿರುವ ಭಾರಿ ಗಾಳಿ ಮಳೆಯಿಂದ ಬದಿಗುಡ್ಡೆ ನಿವಾಸಿ ಬಾಲಕ್ಕ ಗೌಡ ಇವರ ಮನೆಯ ಮಾಡು ಕುಸಿತಗೊಂಡಿದ್ದು ಮನೆಯವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದರು ಆತಂಕಕ್ಕೆ ಒಳಗಾಗಿದ್ದಾರೆ.

ಅಲ್ಲಲ್ಲಿ ಗೋಡೆಗಳಲ್ಲೂ ಬಿರುಕು ಕಾಣಿಸಿಕೊಂಡಿದ್ದು ಮನೆಯವರನ್ನು ಹೆಚ್ಚು ಆತಂಕಕ್ಕೆ ಒಳಪಡಿಸಿದೆ.

ಸ್ಥಳಕ್ಕೆ ಆಗಮಿಸಿದ ಅರಸಿನಮಕ್ಕಿ-ಶಿಶಿಲ ಶೌರ್ಯ ವಿಪತ್ತು ತಂಡದ ಸದಸ್ಯರಾದ ಅವಿನಾಶ್ ಭಿಡೆ, ರಮೇಶ್ ಬೈರಕಟ್ಟ, ನಿತಿನ್ ಬೈರಕಟ್ಟ, ರಾಧ ಕೃಷ್ಣ ಗುತ್ತು ಮನೆ, ಕುಶಾಲಪ್ಪ ಗೌಡ ಬದ್ರಿಜಾಲು, ಕೃಷ್ಣಪ್ಪ ಗೌಡ ಮುಚ್ಚಿರಡ್ಕ, ಸೀನಪ್ಪ ನಾಯ್ಕ್ ಮುಚ್ಚಿರಡ್ಕ ಮುಂತಾದವರು ಮನೆಯ ಒಳಗಡೆಯಿಂದ ಅಲ್ಲಲ್ಲಿ ಬೇರೆ ಕಂಬಗಳ ಮೂಲಕ ಆಧಾರವಾಗಿ ಮನೆಯ ಮೇಲ್ ಚಾವಣಿಯನ್ನು ಯಾವುದೇ ಅಪಾಯ ಬರದಂತೆ ನಿಲ್ಲಿಸಿ ಮನೆಯವರಲ್ಲಿ ಧೈರ್ಯ ತುಂಬಿರುತ್ತಾರೆ.

LEAVE A REPLY

Please enter your comment!
Please enter your name here