ಮಾಲಾಡಿ: ಕುಕ್ಕೇಡಿ ದೇವಾಡಿಗರ ಶ್ರೀ ಲಕ್ಷ್ಮೀ ನರಸಿಂಹ ಸೇವಾ ಘಟಕದ ಅಧ್ಯಕ್ಷರಾಗಿ ಬಾಬು ದೇವಾಡಿಗ, ಕಾರ್ಯದರ್ಶಿಯಾಗಿ ಕೃಷ್ಣಪ್ಪ ದೇವಾಡಿಗ

0

ಕುಕ್ಕೇಡಿ: ದೇವಾಡಿಗರ ಶ್ರೀ ಲಕ್ಷ್ಮೀ ನರಸಿಂಹ ಸೇವಾ ಘಟಕ ಮಾಲಾಡಿ – ಕುಕ್ಕೇಡಿ ಇದರ ವಾರ್ಷಿಕ ಮಹಾಸಭೆ ಅಧ್ಯಕ್ಷ ಪ್ರದೀಪ್ ದೇವಾಡಿಗರ ಅಧ್ಯಕ್ಷತೆಯಲ್ಲಿ ಅವರ ಮನೆಯಲ್ಲಿ ನಡೆಯಿತು.

ವೇಣೂರು ದೇವಾಡಿಗರ ಸೇವಾ ಸಂಘದ ಅಧ್ಯಕ್ಷ ಸುರೇಶ್ ದೇವಾಡಿಗ, ಕಾರ್ಯದರ್ಶಿ ಗಣೇಶ್ ದೇವಾಡಿಗ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಬಾಬು ದೇವಾಡಿಗ, ಕಾರ್ಯದರ್ಶಿಯಾಗಿ ಕೃಷ್ಣಪ್ಪ ದೇವಾಡಿಗ, ಕೋಶಾಧಿಕಾರಿಯಾಗಿ ಪ್ರದೀಪ್ ದೇವಾಡಿಗ, ಉಪಾಧ್ಯಕ್ಷರಾಗಿ ಚಂದಯ್ಯ ದೇವಾಡಿಗ, ಜತೆ ಕಾರ್ಯದರ್ಶಿಯಾಗಿ ರಾಘವ ದೇವಾಡಿಗ, ಸ್ವಸಹಾಯ ಸಂಘದ ಕಾರ್ಯದರ್ಶಿಯಾಗಿ ಸಂತೋಷ್ ದೇವಾಡಿಗ ಹಾಗೂ ಇತರ ಸದಸ್ಯರನ್ನು ಆಯ್ಕೆ ಮಾಡಲಾಯಿತು.ವಿಠ್ಠಲ ದೇವಾಡಿಗ ಸ್ವಾಗತಿಸಿ, ವಿಶ್ವನಾಥ್ ದೇವಾಡಿಗ ನಿರೂಪಿಸಿದರು, ಹರೀಶ್ ದೇವಾಡಿಗ ವಂದಿಸಿದರು.

LEAVE A REPLY

Please enter your comment!
Please enter your name here