ಉರುವಾಲು ಪದವಿನಲ್ಲಿ ಸರ್ಕಲ್ ಸಮಾವೇಶ ಹಾಗೂ ಅನುಸ್ಮರಣೆ ಕಾರ್ಯಕ್ರಮ

0

ಉರುವಾಲು: ಉರುವಾಲು ಪದವಿನಲ್ಲಿ ಸರ್ಕಲ್ ಸಮಾವೇಶ ಕೂರಾ ತಂಙಳ್ ಅನುಸ್ಮರಣೆ ಕಾರ್ಯಕ್ರಮ ಜು.19ರಂದು ಉರುವಾಲು ಪದವು ಮದರಸ ಹಾಲ್ ನಲ್ಲಿ ಸರ್ಕಲ್ ಅಧ್ಯಕ್ಷ ಕಾಸಿಂ ಪದ್ಮುಂಜ ರವರ ಅಧ್ಯಕ್ಷತೆಯಲ್ಲಿ ಜರುಗಿತು.

ಸ್ಥಳೀಯ ಮಸೀದಿಯ ಮುಖ್ಯ ಗುರುಗಳಾದ ಮಸ್ ಊದು ಹಿಮಮಿ ಸಖಾಫಿ ದುಆ ನೆರವೇರಿಸಿದರು.

ಝೋನ್ ಅಧ್ಯಕ್ಷ ಅಬ್ಬಾಸ್ ಬಟ್ಲಡ್ಕ ರವರು ಉದ್ಘಾಟಿಸಿದರು. ಮೂಡಡ್ಕ ಮದೀನತ್ತುಲ್ ಮುನವ್ವರ ಸಂಸ್ಥೆಯ ಮ್ಯಾನೇಜರ್ ಅಶ್ರಫ್ ಸಖಾಫಿ ಮೂಡಡ್ಕ ರವರು ವಿಷಯ ಮಂಡನೆ ನಡೆಸಿದರು.ಸರ್ಕಲ್ ವ್ಯಾಪ್ತಿಯ ಆರು ಯೂನಿಟ್ ನ ಕಾರ್ಯಕಾರಿ ಸಮಿತಿಯ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ತಮ್ಮ ಯೂನಿಟ್ ನಲ್ಲಿ ನಡೆಸಿದ ಕಾರ್ಯಚಟುವಟಿಕೆಗಳ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಉರುವಾಲು ಜಮಾಅತ್ ಅಧ್ಯಕ್ಷ ಅಬ್ದುಲ್ ಹಮೀದ್, ಉರುವಾಲು ಯೂನಿಟ್ ಅಧ್ಯಕ್ಷ ಕಾಸಿಂ ಪೀರ್ಯ, ಇಬ್ರಾಹಿಂ ಮದನಿ ಪೀರ್ಯ, ಸಮಿತಿಯ ಉಪಾಧ್ಯಕ್ಷ ಅಬೂಬಕ್ಕರ್ ಹಾಜಿ ಕನ್ಯಾರಕೋಡಿ ಉಪಸ್ಥಿತರಿದ್ದರು.

ಸರ್ಕಲ್ ಅಧ್ಯಕ್ಷ ಕಾಸಿಂ ಪದ್ಮುಂಜ ರವರು ಸ್ವಾಗತಿಸಿದರು.ಕಾರ್ಯದರ್ಶಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here