ಮಡಂತ್ಯಾರು: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ 15ನೇ ನೂತನ ಶಾಖೆ ಉದ್ಘಾಟನೆ

0

ಮಡಂತ್ಯಾರು: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಪುತ್ತೂರು ಇದರ 15ನೇ ನೂತನ ಮಡಂತ್ಯಾರು ಶಾಖೆಯ ಉದ್ಘಾಟನಾ ಸಮಾರಂಭವು ಜು.11ರಂದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಕಮರ್ಶಿಯಲ್ ಕಾಂಪ್ಲೆಕ್ಸ್ ನಲ್ಲಿ ಜರಗಿತು.

ಉದ್ಘಾಟನೆಯನ್ನು ಮಡಂತ್ಯಾರ್ ಸೇಕ್ರೆಡ್ ಚರ್ಚ್ ಧರ್ಮಗುರು ಫಾ| ಸ್ಟ್ಯಾನಿ ಗೋವಿಯಸ್ ನೆರವೇರಿಸಿದರು. ಬಂಟ್ವಾಳ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸೋಮಯ್ಯ ಹನೈನಡೆ ದೀಪಾ ಪ್ರಜ್ವಲನೆ ಮಾಡಿದರು.

ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಂಘದ ಅಧ್ಯಕ್ಷ ಭಾಸ್ಕರ ಎಂ. ಪೆರುವಾಯಿ ಅಧ್ಯಕ್ಷತೆ ವಹಿಸಿದ್ದರು. ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪುನೀತ್ ಕುಮಾರ್ ಠೇವಣಿ ಪತ್ರ ಬಿಡುಗಡೆ ಗೊಳಿಸಿ ಸೋಮಯ್ಯ ಯವರಿಗೆ ಹಸ್ತಾಂತರಿಸಿದರು.

ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷೆ ರೂಪಾ ನವೀನ್ ಭದ್ರತಾ ಕೊಠಡಿ ಉದ್ಘಾಟಿಸಿದರು. ಪುತ್ತೂರು ವಾಣಿಜ್ಯ ತೆರಿಗೆ ಅಧಿಕಾರಿ ಯತೀಶ್ ಸಿರಿಮಜಲು ಗಣಕೀಕರಣ ಉದ್ಘಾಟಿಸಿದರು.

ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ, ಉದಯ ಬಿ.ಕೆ. ವಕೀಲರು, ಮಾಲಾಡಿ ಗ್ರಾ.ಪಂ. ಸದಸ್ಯ ರಾಜೇಶ್ ಕೊದ್ಯೇಲು, ನೂತನ್ ಕ್ಲಾತ್ ಸೆಂಟರ್ ನ ಪ್ರಕಾಶ್ ರೊಡ್ರಿಗಸ್, ಪ್ರೇಮಾನಂದ ಮಂಗಳೂರು ಭಾಗವಹಿ

ಸಿ ಶುಭ ಹಾರೈಸಿದರು.

ಕಾರ್ಯನಿರ್ವಹಣಾಧಿಕಾರಿ ಎಸ್. ಜನಾರ್ದನ್, ಸಹಕಾರ ಸಂಘದ ಉಪಾಧ್ಯಕ್ಷ ದಾಮೋದರ್ ವಿ., ನಿರ್ದೇಶಕರಾದ ಬಿ.ಎಸ್. ಕುಲಾಲ್, ಗಣೇಶ್ ಪಿ., ಹೆಚ್. ಪದ್ಮ ಕುಮಾರ್, ಶಿವಪ್ಪ ಮೂಲ್ಯ, ಸೇಸಪ್ಪ ಕುಲಾಲ್, ಪ್ರಶಾಂತ ಬಂಜನ್, ನಾಗೇಶ್ ಕುಲಾಲ್, ಸಚ್ಚಿದಾನಂದ ಡಿ., ಶ್ರೀಮತಿ ಜಯಶ್ರೀ ಎಸ್., ಶ್ರೀಮತಿ ಶುಭ ಎ. ಬಂಜನ್, ಪ್ರಬಂಧಕ ರಕ್ಷಿತ್ ಕೆ. ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here