ಉಜಿರೆ: ವರ್ತಕರಿಂದ ರಿಕ್ಷಾದ ಮೇಲೆ ಮರ ಬಿದ್ದು ಗಾಯಗೊಂಡ ರತ್ನಾಕರರಿಗೆ ಸಹಾಯ ಹಸ್ತ

0

ಉಜಿರೆ: ಉಜಿರೆಯಲ್ಲಿ ರಿಕ್ಷಾ ಚಲಿಸುತ್ತಿದ್ದಾಗ ರಿಕ್ಷಾದ ಮೇಲೆ ಮರ ಬಿದ್ದು ಗಾಯಗೊಂಡಿದ್ದ ರತ್ನಾಕರ ಗೌಡರ ಕಷ್ಟಕ್ಕೆ ಸ್ಪಂದಿಸಿದ ಉಜಿರೆ ವರ್ತಕ ಸಂಘದ ವರ್ತಕರಿಂದ ಸಹಾಯ ಹಸ್ತ ಎಂಬ ಯೋಜನೆಯಡಿ ವರ್ತಕರೆಲ್ಲರೂ ಸೇರಿಕೊಂಡು ಸುಮಾರು 16000 ರೂಪಾಯಿ ಸಂಗ್ರಹ ಮಾಡಿ ಆಟೋ ರಾಜ ರಿಕ್ಷಾ ಡ್ರೈವರ್ ರತ್ನಾಕರರಿಗೆ ನೀಡಲಾಯಿತು.

ಈ ಸಂದರ್ಭ ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ್, ಜೊತೆ ಕಾರ್ಯದರ್ಶಿ ಪ್ರಸಾದ್ ರಮ್ಯ ಫ್ಯಾನ್ಸಿ, ಉಪಾಧ್ಯಕ್ಷರುಗಳಾದ ಹುಕುಂರಾಮ್ ಪಟೇಲ್ ಶಾರದಾ ಶೋರೂಂ, ರವಿಕುಮಾರ್ ಬರೆಮೇಲು, ಪ್ರಭಾಕರ್ ಮಹಾವೀರ, ಪ್ರವೀಣ್ ಹಳ್ಳಿಮನೆ ಸದಸ್ಯರಾದ ಜಯಂತ್ ನಮನ್ ಬೇಕರಿ, ರಿಚರ್ಡ್ ರಾಂಬೋ ಮುಂತಾದವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here