ಪದ್ಮುಂಜದಲ್ಲಿ ಸಂಭ್ರಮದ ಬಕ್ರೀದ್ ಆಚರಣೆ

0

ಪದ್ಮುಂಜ: ಇಲ್ಲಿಯ ಖಲಂದರ್ ಷಾ ಜುಮಾ ಮಸೀದಿಯಲ್ಲಿ ಶಾಂತಿ ಸೌಹಾರ್ದತೆಯನ್ನು ಸಾರುವ ಸಂಭ್ರಮದ ಬಕ್ರೀದ್ ಹಬ್ಬ ಆಚರಿಸಲಾಯಿತು.

ಮುಖ್ಯ ಗುರುಗಳಾದ ಮುಹಮ್ಮದ್ ನಿಜಾಮುದ್ದೀನ್ ಝುಹುರಿ ಉಸ್ತಾದರು ಖುತ್ಬಾ ನಿರ್ವಹಿ ಮಾತನಾಡಿ ಬಕ್ರೀದ್ ಸಂಭ್ರಮಾಚರಣೆಯ ಹುರುಪಿನಲ್ಲಿ ಅನಿಸ್ಲಾಮಿಕವಾದ ಚಟುವಟಿಕೆಯಲ್ಲಿ ಯಾರೂ ಪಾಲ್ಗೊಳ್ಳಬಾರದು ಎಂದರು.

ಸಹ ಅಧ್ಯಾಪಕರಾದ ಅಬ್ದುರ್ರಾಶಿದ್ ಹಿಕಮಿ ಉಸ್ತಾದ್, ಜಮಾತ್ ಅಧ್ಯಕ್ಷ ರಫೀಖ್ ಅಂತರ, ಪ್ರಧಾನ ಕಾರ್ಯದರ್ಶಿ ಕಾಸಿಂ ಪದ್ಮುಂಜ ಸೇರಿದಂತೆ ಜಮಾಅತ್ ನೇತಾರರು, ಮುಸ್ಲಿಂ ಜಮಾಅತ್, ಎಸ್ ವೈ ಎಸ್.ಎಸ್ ಎಸ್ ಎಫ್. ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here