ಕುಕ್ಕಾವಿನಲ್ಲಿ ಡೆತ್ ನೋಟ್ ಬರೆದಿಟ್ಟು ಕಾಣೆಯಾದ ಬಾಣಂತಿ: ಪೋನ್ ಸ್ವಿಚ್ ಆಫ್‌- ಪೊಲೀಸರಿಗೆ ದೂರು- ಹುಡುಕಾಟದಲ್ಲಿರುವ ಮನೆಯವರು

0

ಕಡಿರುದ್ಯಾವರ: ಮಾನಸಿಕ ಕಿರುಕುಳಕ್ಕೆ ಮನನೊಂದು ಡೆತ್ ನೋಟ್ ಬರೆದಿಟ್ಟು ಒಂದೂವರೆ ತಿಂಗಳ ಮಗುವಿನ ತಾಯಿ ನಾಪತ್ತೆಯಾದ ಘಟನೆ ಬೆಳ್ತಂಗಡಿ ತಾಲೂಕಿನ ಕುಕ್ಕಾವಿನಲ್ಲಿ ನಡೆದಿದೆ.

ಕಡಿರುದ್ಯಾವರ ಗ್ರಾಮದ ನೆರೊಲ್ದಡಿಯಲ್ಲಿ ಗಣೇಶ್ ದೇವಾಡಿಗರ ಪತ್ನಿ ಭವ್ಯ ಇವರು ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾದ ಘಟನೆ ಜೂ07 ರಂದು ಕುಕ್ಕಾವಿನಲ್ಲಿ ನಡೆದಿದೆ.

ಒಂದುವರೆ ತಿಂಗಳಿನ ಹಾಗೂ ಅಂಗನವಾಡಿಗೆ ಹೋಗುವ ಮಕ್ಕಳಿದ್ದ ತಾಯಿಗೆ ತನ್ನ ತವರು ಮನೆಯ ಆಸ್ತಿ ಪಾಲಾಗುವ ಸಂದರ್ಭದಲ್ಲಿ ಇವರಿಗೆ ಆಸ್ತಿಯಲ್ಲಿ 5 ಲಕ್ಷ ಮೊತ್ತ ಸಿಕ್ಕಿತ್ತು.ಇದನ್ನು ತನ್ನ ಮಗಳ ಹೆಸರಿನಲ್ಲಿ ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದರು.

ಇದೇ ವಿಚಾರದಲ್ಲಿ ಭವ್ಯರವರಿಗೆ ಕೆಲವರು ನಿನ್ನ ಗಂಡ, ಗಂಡನ ಮನೆಯವರು ಸರಿ ಇಲ್ಲ ಎಂದು ಪ್ರತಿದಿನ ಮಾತನಾಡುತ್ತಾ,ತಲೆಗೆ ತುಂಬಿಸುತ್ತಾ ಮಾನಸಿಕ ಹಿಂಸೆ ನೀಡಿರುವುದಾಗಿ ಡೆತ್ ನೋಟ್ ನಲ್ಲಿ ಬರೆಯಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಇದರಿಂದ ಮನನೊಂದ ಭವ್ಯ ಡೆತ್ ನೋಟ್ ಬರೆದಿಟ್ಟು ಕಾಣೆಯಾಗಿದ್ದಾರೆ.ಇಂದು ಜೂನ್ 07 ರಂದು ಬೆಳ್ತಂಗಡಿ ಪೋಲೀಸ್ ಠಾಣೆಯಲ್ಲಿ ಈ ಬಗ್ಗೆ ಪತಿ ದೂರು ನೀಡಿದ್ದಾರೆ ಡೆತ್ ನೋಟ್ ಪುಸ್ತಕ ಮನೆಯವರಿಗೆ ಸಿಕ್ಕಿರುತ್ತದೆ.ಆಕೆ ಪತ್ತೆಯಾಗದಿರುವುದರಿಂದ ಮನೆಯವರು ಆತಂಕಗೊಂಡಿದ್ದಾರೆ.

LEAVE A REPLY

Please enter your comment!
Please enter your name here