ಮೇಸ್ತ್ರಿ ಕೆಲಸ ಮಾಡುತ್ತಿದ್ದಾಗ ಮಹಡಿಯಿಂದ ಬಿದ್ದು ಕುಕ್ಕೇಡಿಯ ಯುವಕ ಸಾವು

0

ವೇಣೂರು: ಮೇಸ್ತ್ರಿ ಕೆಲಸ ನಿರ್ವಹಿಸುತ್ತಿರುವಾಗ ಆಕಸ್ಮಿಕವಾಗಿ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಮೂಡಬಿದ್ರೆಯಲ್ಲಿ ಇಂದು ಮೇ 30 ರಂದು ನಡೆದಿದೆ.

ಮೃತ ಯುವಕನನ್ನು ವೇಣೂರು ಕುಕ್ಕೇಡಿ ಸಮೀಪದ ಕರ್ತ್ಯಾ‌ರ್ ಮನೆಯ ಸುರೇಶ್ ಕುಲಾಲ್ (32ವ) ಎಂದು ಗುರುತಿಸಲಾಗಿದೆ.

ಕೆಲವು ಸಮಯದಿಂದ ಮೇಸ್ತ್ರಿ ಕೆಲಸ ನಿರ್ವಹಿಸುತ್ತಿದ್ದರು.ಇತ್ತಿಚೇಗೆ ಮೂಡಬಿದ್ರೆಯಲ್ಲಿ ಶಾಲೆಯೊಂದರ ಕೆಲಸದಲ್ಲಿ ನಿರತರಾಗಿದ್ದರು.

ಕೆಲಸ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಮಹಡಿಯಿಂದ ಬಿದ್ದು ಕಲ್ಲಿಗೆ ತಲೆ ತಾಗಿ ಗಂಭೀರ ಗಾಯಗೊಂಡು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.

ಈ ಪ್ರಕರಣ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಮೃತರು ತಾಯಿ, ಸಹೋದರ, ಸಹೋದರಿಯರು, ಕುಟುಂಬಸ್ಥರು ಹಾಗೂ ಮಿತ್ರರನ್ನು ಆಗಲಿದ್ದಾರೆ.

LEAVE A REPLY

Please enter your comment!
Please enter your name here