ಲಾಯಿಲ ಶ್ರೀ ರಾಘವೇಂದ್ರ ಮಠಕ್ಕೆ ಶೀರೂರು ಪೀಠಾಧಿಪತಿಗಳ ಆಗಮನ

0

ಬೆಳ್ತಂಗಡಿ: ಲಾಯಿಲ ಶ್ರೀ ರಾಘವೇಂದ್ರ ಮಠಕ್ಕೆ ಶ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉಡುಪಿ ಶೀರೂರು ಮಠದ ಪೀಠಾಧಿಪತಿಗಳಾದ ವೇದವರ್ಧನ ಶ್ರೀಪಾದಂಗಳವರು ಮೇ 30ರಂದು ಆಗಮಿಸಿದರು.

ಅವರನ್ನು ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪೀತಾಂಬರ ಹೇರಾಜೆ, ಉಪಾಧ್ಯಕ್ಷ ಮಹಾಬಲ ಶೆಟ್ಟಿ, ಕೋಶಾಧಿಕಾರಿ ವಸಂತ ಸುವರ್ಣ, ಜೊತೆ ಕಾರ್ಯದರ್ಶಿ ಶಂಕರ ಹೆಗ್ಡೆ , ಕೃಷ್ಣ ಶೆಟ್ಟಿ, ಜಯರಾಮ ಬಂಗೇರ ಹೇರಾಜೆ, ಸುರೇಶ್ ಶೆಟ್ಟಿ, ಇತರ ಗಣ್ಯರು ಕ್ಷೇತ್ರದ ಮುಖ್ಯ ಪುರೋಹಿತ ರಾಘವೇಂದ್ರ ಬಾಂಗೀನಾಯರವರ ನೇತೃತ್ವದಲ್ಲಿ ಸ್ವಾಗತಿಸಿದರು.

ರಾತ್ರಿ ಮಠದ ಪಟ್ಟದ ದೇವರ ತೊಟ್ಟಿಲು ಪೂಜಾ ಕಾರ್ಯಕ್ರಮದ ನಂತರ ಕ್ಷೇತ್ರದಲ್ಲಿ ಮುಕ್ಕಾಂ. ಮೇ 31ರಂದು ಶುಕ್ರವಾರ ಮಧ್ಯಾಹ್ನ ಶ್ರೀದೇವರ ಸಂಸ್ಥಾನ ಪೂಜೆ ನಡೆಯಲಿದೆ.

LEAVE A REPLY

Please enter your comment!
Please enter your name here