ಹತ್ಯಡ್ಕ: ಬನತ್ತಡಿ ಎಂಬಲ್ಲಿ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ- ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ

0

ಹತ್ಯಡ್ಕ: ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿದ ಘಟನೆ ಬೆಳ್ತಂಗಡಿ ತಾಲೂಕು ಹತ್ಯಡ್ಕ ಗ್ರಾಮದ ಬನತ್ತಡಿ ಎಂಬಲ್ಲಿ ನಡೆದಿದೆ.

ಬೆಳ್ತಂಗಡಿ ಹತ್ಯಡ್ಕ ಗ್ರಾಮ ನಿವಾಸಿ ಸೀತಾರಾಮ ರೈ, ಎಂಬವರ ಮನೆಯ ಅಂಗಳಕ್ಕೆ ಎ.02ರಂದು ರಾತ್ರಿ, ಮನೆಯ ಅಂಗಳಕ್ಕೆ ನೆರೆಕೆರೆಯ ನಿವಾಸಿ ಆರೋಪಿ ದಿಲೀಪ್ ಎಂಬಾತನು ಕೈಯಲ್ಲಿ ಕಬ್ಬಿಣದ ದೊಣ್ಣೆಯನ್ನು ಹಿಡಿದು ಅಕ್ರಮ ಪ್ರವೇಶ ಮಾಡಿ, ಸೀತಾರಾಮ ರೈ ಎಂಬವರನ್ನು ಉದ್ದೇಶಿಸಿ, ಅವಾಚ್ಯ ಶಬ್ದಗಳಿಂದ ಬೈದು, ಕಲ್ಲೊಂದನ್ನು ಸೀತಾರಾಮ ರೈ ಯವರ ಪತ್ನಿಯ ತಲೆಗೆ ಬಿಸಾಡಿ ಜೀವ ಬೆದರಿಕೆ ಹಾಕಿದ್ದಾನೆ.

ಘಟನೆ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ: 22/2024 ಕಲಂ: 447, 504, 324, 506 IPC ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

LEAVE A REPLY

Please enter your comment!
Please enter your name here