ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜಸೇವಾ ಸಂಘಟನೆಯಿಂದ ಆಸರೆ 3ನೇ ಮನೆ ಹಸ್ತಾಂತರ

0

ಅಳದಂಗಡಿ: ಡಿ.25ರಂದು 41ನೇ ಸೇವಾಯೋಜನೆ ಆಸರೆ 3 ಮನೆಯನ್ನು ಮನೆಯ ಯಜಮಾನರಾದ ರುಕ್ಮಯ ಕಾಫಿಗುಡ್ಡೆ ಇವರಿಗೆ ಹಸ್ತಾಂತರ ಕಾರ್ಯಕ್ರಮವು ಸಂಘಟನೆಯ ಗೌರವ ಅಧ್ಯಕ್ಷ ಶಿವಪ್ರಸಾದ್ ಅಜಿಲರು, ಗುರುದೇವ ಬ್ಯಾಂಕ್ ಮುಖ್ಯಕಾರ್ಯನಿರ್ವಾಹಕರಾದ ಅಶ್ವಥ್, ಪ್ರಗತಿಪರ ಕೃಷಿಕರಾದ ಶಿವಾನಂದ ಹೆಗ್ಡೆ ಪರ್ಲಾಂಡ, ಗೌರವ ಸಲಹೆಗಾರರಾದ ಡಾ.ಶಶಿಧರ್ ಡೋಂಗ್ರೆ, ಗೌರವ ಸಲಹೆಗಾರರಾದ ಸುರೇಶ್ ಪೂಜಾರಿ ಮುಂಬೈ, ಪವರ್ ಆನ್ ಮಾಲೀಕರು ಮತ್ತು ಗೌರವ ಸಲಹೆಗಾರರಾದ ಶೀತಲ್ ಜೈನ್, ಮಹಿಳಾ ಘಟಕದ ಸಂಘಟನಾ ಪ್ರಮುಖರಾದ ಮಂಗಳ ಕೆ. ಗುರುವಾಯನಕೆರೆ ಮತ್ತು ಸಂಘಟನೆಯ ಸದಸ್ಯರ ಸಮಕ್ಷಮದಲ್ಲಿ ನಡೆಯಿತು.

ಸಂಘಟನೆಯ ಅಧ್ಯಕ್ಷ ದೇವದಾಸ್ ಸಾಲ್ಯಾನ್ ಪ್ರಸ್ಥವನೆಯೊಂದಿಗೆ ಸ್ವಾಗತಿಸಿದರು.ಚಂದ್ರಹಾಸ ಬಳಂಜ ಇವರು ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಕ್ರೀಡಾಕ್ಷೇತ್ರದಲ್ಲಿ ಎತ್ತರ ಜಿಗಿತದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಚಿನ್ನದ ಪದಕ ಗೆದ್ದ ಶುಶಾಂತ್ ಎಸ್ ಪೂಜಾರಿಯನ್ನು ಸನ್ಮಾನಿಸಲಾಯಿತು‌.

LEAVE A REPLY

Please enter your comment!
Please enter your name here