ಅರಸಿನಮಕ್ಕಿ: ಅರೆಕಲ್ ಮಹಾದೇವ ಭಟ್ರ ತೋಟಕ್ಕೆ ಕಾಡಾನೆ ದಾಳಿ ಅಪಾರ ಪ್ರಮಾಣದ ಕೃಷಿ ನಾಶ

0

ಅರಸಿನಮಕ್ಕಿ: ಅರೇಕಲ್ ನಿವಾಸಿ ಮಹದೇವ್ ಭಟ್ರ ತೋಟಕ್ಕೆ ಆ.12ರಂದು ಮಧ್ಯರಾತ್ರಿ ಕಾಡಾನೆ ದಾಳಿ ಮಾಡಿದ ವರದಿಯಾಗಿದೆ.

ದಾಳಿಯಲ್ಲಿ 4ರಿಂದ 5ವರ್ಷ ಪ್ರಾಯದ 10ತೆಂಗಿನ ಗಿಡ ಸುಮಾರು 20ಕ್ಕೂ ಹೆಚ್ಚು ಬಾಳೆಗಿಡ ಪಸಲು ಬರಲು ತಯಾರಾಗಿದ್ದ 40 ಅಡಿಕೆ ಗಿಡ ಮತ್ತು ತೋಟದ ನೀರಾವರಿಗೆ ಅಳವಡಿಸಿದ್ದ ಪೈಪ್ ಲೈನ್ ಸ್ಪಿಕ್ಲಾರ್ ಗಳನ್ನು ಸಂಪೂರ್ಣವಾಗಿ ಪುಡಿ ಪುಡಿ ಮಾಡಿದ್ದು ಅಪಾರ ಪ್ರಮಾಣದ ಬೆಳೆ ನಾಶ ಆಗಿರುತ್ತದೆ.

ಅರಣ್ಯ ಇಲಾಖೆಯ ಫಾರೆಸ್ಟ ಸಂತೋಷ್ ಅವರಿಗೆ ಮನೆಯವರು ಮಾಹಿತಿ ನೀಡಿದ್ದು ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆಯಿಂದ ಸಿಗುವ ಸೂಕ್ತ ಪರಿಹಾರದ ಭರವಸೆಯನ್ನು ನೀಡಿರುತ್ತಾರೆ.

LEAVE A REPLY

Please enter your comment!
Please enter your name here