ಭಾರತದ ಸಾರ್ವಭೌಮತೆಗೆ, ಜಾತ್ಯತೀತವಾದಕ್ಕೆ, ಸ್ವಾರ್ಥರಹಿತ ಸಮಾಜಕ್ಕೆ ಮತ್ತು ಸರ್ವಜನರ ಡಾ.ಬಿ.ಆರ್‌.ಅಂಬೇಡ್ಕರ್‌ ನೀಡಿದ ಕೊಡುಗೆ ಅಮೂಲ್ಯವಾದದ್ದು :ರಕ್ಷಿತ್ ಶಿವರಾಂ

0

ಬೆಳ್ತಂಗಡಿ: ಕೊಯ್ಯೂರು ಬೀಮ್ ರಮಾ ಯುವ ವೇದಿಕೆ ಆಶ್ರಯದಲ್ಲಿ ಅದುರ್ ಪೆರಾಲ್ ನಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭಾಗವಹಿಸಿ.

ರಾಜಕೀಯ ಅವಕಾಶ, ಉದ್ಯೋಗ ಭರವಸೆ ಮತ್ತು ಆರ್ಥಿಕ ಸ್ವಾತಂತ್ರತ್ರ್ಯ ಎಲ್ಲರಿಗೂ ದೊರೆಯಲಿ ಎಂಬ ಉದ್ದೇಶದಿಂದ ಕೂಡಿರುವ ಸಂವಿಧಾನವನ್ನು ರಚಿಸಿ ಎಲ್ಲರಿಗೂ ಸಮಪಾಲು ಎಲ್ಲರಿಗೂ ಸಮಬಾಳು ಎಂಬ ತತ್ವವನ್ನು ವಿಶ್ವಕ್ಕೆ ಸಾರಿದ ವಿಶ್ವಮಾನವ ಡಾ.ಅಂಬೇಡ್ಕರವರ ಆದರ್ಶಗಳನ್ನು ಪಾಲಿಸಿಕೊಂಡು ಅವರ ಜೀವನ ತತ್ವವನ್ನು ಮುನ್ನಡೆಸಿದರೆ ಮಾತ್ರ ಸಾಧ್ಯವೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೀಮ್ ರಮಾ ಯುವ ವೇದಿಕೆ ಅಧ್ಯಕ್ಷರಾದ ಪ್ರತೀಶ್ ಕೊಯ್ಯುರು ವಹಿಸಿದ್ದರು ಈ ಸಂದರ್ಭದಲ್ಲಿ ದಲಿತ ಸಂಘಟನೆ ಹಿರಿಯ ಮುಖಂಡರಾದ ವೆಂಕಣ್ಣ ಕೊಯ್ಯುರು,ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಪ್ರವೀಣ್ ಗೌಡ, ಗ್ರಾಮ ಪಂಚಾಯತ್ ಸದಸ್ಯರಾದ ಲೋಕೇಶ್ ಗೌಡ ಪಾಂಬೆಲು,ಹಾಗೂ ಪ್ರಮುಖರಾದ ಜಯನಂದ ಕೊಯ್ಯುರು,ತಿಮ್ಮಪ್ಪ ಹೇಮಲ್ಕೆ,ಶೇಖರ್ ಹೇಮಲ್ಕೆ,ಜಯರಾಮ್ ಮಯ್ಯ ಹೇಮಲ್ಕೆ,ಶೇಖರ್ ಬಿಮಂಡೆ,ತಿಲಕ್ ನಾಥ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here