ಕಲ್ಮಂಜ ಪಜಿರಡ್ಕ ಬ್ರಹ್ಮಕಲಶೋತ್ಸವ: ಉದಯಾಸ್ತಮನ ಭಜನೆ ಕಾರ್ಯಕ್ರಮ

0

ಕಲ್ಮಂಜ :ಕಲ್ಮಂಜ ಗ್ರಾಮದ ಶ್ರೀ ಸದಾಶಿವೇಶ್ವರ ದೇವಸ್ಥಾನ, ಸಂಗಮ ಕ್ಷೇತ್ರ, ಪಜಿರಡ್ಕ ಇಲ್ಲಿನ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಎರಡನೇ ದಿನವಾದ ಫೆ.1ರಂದು ತ್ರಿಕಾಲ ಪೂಜೆ,ಗಣಪತಿ ಪೂಜೆ, ಸ್ಥಳ ಶುದ್ಧಿ, ಬಿಂಬಶುದ್ಧಿ, ಕಲಶ ಪೂಜೆ, ಪ್ರೋಕ್ತ ಹೋಮ, ಪ್ರಾಯಶ್ಚಿತ್ತ ಹೋಮ, ಕುಂಡ ಶುದ್ಧಿ, ಅಂಕುರ ಪೂಜೆ ಮೊದಲಾದ ವೈದಿಕ ಕಾರ್ಯಕ್ರಮಗಳು ಜರುಗಿದವು.
ಬೆಳಿಗ್ಗೆ 6ಗಂಟೆಯಿಂದ ಆರಂಭವಾದ ಉದಯಾಸ್ತಮಾನ ಭಜನೆ ಕಾರ್ಯಕ್ರಮವನ್ನು ಮುಂಡಾಜೆ ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ವಿನಯಚಂದ್ರ ಉದ್ಘಾಟಿಸಿದರು. ಹಲವಾರು ಭಜನೆ ತಂಡಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದವು. ಧರ್ಮಸ್ಥಳ ಹಾಗೂ ಬೆಳಾಲು ಗ್ರಾಮಸ್ಥರು ಹೊರೆಕಾಣಿಕೆ ಸಮರ್ಪಿಸಿದರು. ಸಂಜೆ ಕಲ್ಲಡ್ಕ ವಿಠಲ್ ನಾಯಕ್ ಬಳಗದಿಂದ ಗೀತಾ-ಸಾಹಿತ್ಯ ಸಂಭ್ರಮ ಮುಂಡಾಜೆಯ ಕೀರ್ತನಾ ಕಲಾತಂಡದಿಂದ ತುಳುನಾಡ ಸಿರಿ ಗೀತರೂಪಕ ನಡೆಯಿತು.


ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಮಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ, ಮತ್ತಿತರ ಗಣ್ಯರು ಭೇಟಿ ನೀಡಿದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ತುಕಾರಾಂ ಸಾಲಿಯಾನ್ ಸ್ವಾಗತಿಸಿದರು.ವಿವಿಧ ಸಮಿತಿಗಳ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here