ನಾಲ್ಕೂರು: ಕಂಚಿನಡ್ಕ ಆಶ್ಲೇಷಾ ಬಲಿ, ಶ್ರೀ ಸಾರ್ವಜನಿಕ ಶನೀಶ್ವರ ಪೂಜೆ

0

ನಾಲ್ಕೂರು: ಶ್ರೀ ನಾಗಬ್ರಹ್ಮ ಮತ್ತು ಮೂಜುಲ್ನಾಯ ಬ್ರಹ್ಮಸ್ಥಾನ ಕಂಚಿನಡ್ಕದಲ್ಲಿ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಪ್ರಯುಕ್ತ ಆಶ್ಲೇಷಾ ಬಲಿ ಮತ್ತು ಸಾರ್ವಜನಿಕ ಶ್ರೀ ಶನೀಶ್ವರ ಪೂಜೆ ಜ‌ 29 ರಂದು ನಡೆಯಿತು.

ನೂರಾರು ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ಉದ್ಯಮಿ ಹರೀಶ್ ಶೆಟ್ಟಿ ಕಂರ್ಬಿತ್ತಿಲ್, ಹಾಗೂ ಪಂಚಾಯತ್ ಸದಸ್ಯರು ಹಾಗೂ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು.

ಸಮಿತಿ ಅಧ್ಯಕ್ಷ ವಿನಯ್ ಕುಮಾರ್, ಕಾರ್ಯದರ್ಶಿ ಪ್ರಭಾಕರ ಪೂಜಾರಿ, ಆರ್ಚಕರಾದ ಶ್ರೀಧರ ಭಟ್, ಜಯಂತ ಭಟ್ ಹಾಗೂ ಸಮಿತಿಯವರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

LEAVE A REPLY

Please enter your comment!
Please enter your name here